ಉಡುಪಿ: ಕುಂದಾಪುರ ತಾಲೂಕು ಗುಜ್ಜಾಡಿ ಗ್ರಾಮದ ಕಂಚುಗೋಡು ಸನ್ಯಾಸಿಬಲ್ಲೆ ನಿವಾಸಿ ಶಾಂತಿ ಖಾರ್ವಿ ಎಂಬವರ ಪುತ್ರ ಕಿರಣ (19) ಎಂಬಾತ ಅಕ್ಟೋಬರ್ 22ರಂದು ಬೆಳಗ್ಗೆ 9 ಗಂಟೆಯಿಂದ ನಿಗೂಢವಾಗಿ ಕಾಣೆಯಾಗಿದ್ದಾನೆ.
ಅ.21ರಂದು ರಾತ್ರಿ ಗಂಟೆ 8.45ಕ್ಕೆ ತಾಯಿಗೆ ಮೊಬೈಲ್ ಕರೆ ಮಾಡಿದ ಕಿರಣ್, ತಾನು ಬೆಂಗಳೂರಿನಿಂದ ಕೆ.ಎಸ್.ಆರ್.ಟಿ.ಸಿ. ಬಸ್ ಹತ್ತಿರುವುದಾಗಿ ತಿಳಿಸಿದ್ದಾನೆ. ಮರುದಿನ ಬೆಳಗ್ಗೆ 9 ಗಂಟೆಗ, ಮತ್ತೆ ತಾಯಿಗೆ ಮೊಬೈಲ್ ಕರೆ ಮಾಡಿ, ತಾನೀಗ ಕುಂದಾಪುರ ಶಾಸ್ತ್ರಿ ಸರ್ಕಲ್ ನಲ್ಲಿ ಇರುವುದಾಗಿಯೂ, ಮೊಬೈಲ್ ಸ್ವಿಚ್ ಆಫ್ ಆಗುತ್ತಿರುವುದಾಗಿಯೂ ತಿಳಿಸಿದ್ದಾನೆ. ಬಳಿಕ ಮನೆಗೆ ಬಾರದೆ ಕಾಣೆಯಾಗಿದ್ದಾನೆ.
ಕಳೆದ ಎಂಟು ತಿಂಗಳಿಂದ ಬೆಂಗಳುರಿನ ಬೇಕರಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಕಿರಣ್, ನಿಗೂಢವಾಗಿ ಕಾಣೆಯಾದ ಬಗ್ಗೆ ಆತನ ತಾಯಿ ಶಾಂತಿ ಖಾರ್ವಿಯವರ ತಮ್ಮ ರವಿ ಖಾವರ್ಿ ನೀಡಿದ ದೂರಿನಂತೆ ಕುಂದಾಪುರ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.