ಬೈಕ್ ಡಿಕ್ಕಿ: ಅಪರಿಚಿತ ಪಾದಚಾರಿ ಸಾವು

Posted: ಫೆಬ್ರವರಿ 16, 2014 in Uncategorized

ಉಡುಪಿ: ಅಂಬಾಗಿಲು ಕಡೆಯಿಂದ ಸಂತೆಕಟ್ಟೆ ಕಡೆಗೆ ಸಂಚರಿಸುತ್ತಿದ್ದ ಬೈಕ್ ರಸ್ತೆ ದಾಟಲು ನಿಂತಿದ್ದ ಅಪರಿಚಿತ ಪಾದಚಾರಿಯೊಬ್ಬರಿಗೆ ಡಿಕ್ಕಿ ಹೊಡೆದ ಪರಿಣಾಮವಾಗಿ ಪಾದಚಾರಿ ಗಂಭೀರವಾಗಿ ಗಾಯಗೊಂಡು ಬಳಿಕ ಆಸ್ಪತ್ರೆಯಲ್ಲಿ ಮೃತಪಟ್ಟ ಘಟನೆ ಮಧುವನ ಬಾರ್ ಬಳಿ ಸಂಭವಿಸಿದೆ.

ಫೆ.13ರಂದು ರಾತ್ರಿ ಗಂಟೆ ಹೊತ್ತಿಗೆ ಅಪಘಾತ ಸಂಭವಿಸಿದೆ. ಅಪರಿಚಿತ ಗಾಯಾಳುವನ್ನು ಕೂಡಲೇ ಸಾರ್ವಜನಿಕರು ಮಣಿಪಾಲದ ಕೆಎಂಸಿ ಆಸ್ಪತ್ರೆಗೆ ಕರೆದೊಯ್ದು ಪ್ರಾಥಮಿಕ ಚಿಕಿತ್ಸೆ ಕೊಡಿಸಿದ್ದು, ಬಳಿಕ ಮಂಗಳೂರಿನ ವೆನ್ಲಾಕ್ ಜಿಲ್ಲಾ ಸರಕಾರಿ ಆಸ್ಪತ್ರೆಗೆ ಸಾಗಿಸಿ ಒಳರೋಗಿಯಾಗಿ ದಾಖಲಿಸಿದ್ದಾರೆ. ಇಲ್ಲಿ ಫೆ.14ರಂದು ಪೂರ್ವಾಹ್ನ 11 ಗಂಟೆಗೆ ಗಾಯಾಳು ಮೃತಪಟ್ಟಿದ್ದಾರೆ.

ಅಪಘಾತವೆಸಗಿದ ಬೈಕ್ ನ ಹಿಂಬದಿ ಸಹ ಸವಾರರಾಗಿ ಕುಳಿತಿದ್ದ ಸತೀಶ್ ಎಂಬವರಿಗೂ ಗಾಯಗಳಾಗಿವೆ. ಈ ಬಗ್ಗೆ ಸಂತೆಕಟ್ಟೆ ಸಮೀಪದ ಗೋಪಾಲಪುರ 4 ನೇ ಕ್ರಾಸ್ ನಿವಾಸಿ ಸುಧೀರ್ ನಾಯ್ಕ್ ನೀಡಿದ ದೂರಿನ ಪ್ರಕಾರ ಉಡುಪಿ ಸಂಚಾರ ಠಾಣೆಯ ಪೊಲೀಸರು ಬೈಕ್ ಸವಾರ ಸುಕೇಶ್ ವಿರುದ್ಧ ಮೊಕದ್ದಮೆ ದಾಖಲಿಸಿಕೊಂಡಿದ್ದಾರೆ.

ನಿಮ್ಮ ಟಿಪ್ಪಣಿ ಬರೆಯಿರಿ