ಉಡುಪಿ: ಕೆಲವು ವರ್ಷಗಳ ಹಿಂದೆ ಕಾರ್ಕಳ ತಾಲೂಕಿನ ಸೀತಾನದಿ ಪರಿಸರ ಪ್ರದೇಶದಲ್ಲಿ ನಡೆದ ಶಿಕ್ಷಕ ಮತ್ತು ಬಡ್ಡಿ ವ್ಯಾಪಾರಿ ಭೋಜ ಶೆಟ್ಟಿ ಹಾಗೂ ಇನ್ನೋರ್ವರನ್ನು ಗುಂಡು ಹಾರಿಸಿ ಹತ್ಯಗೈದ ಪ್ರಕರಣಕ್ಕೆ ಸಂಬಂಧಿಸಿದಂತೆ, ಪ್ರಕರಣದ ಎಲ್ಲಾ ಶಂಕಿತ ನಕ್ಸಲ್ ಆರೋಪಿಗಳನ್ನೂ ಉಡುಪಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರು ಇಂದು ಆರೋಪಮುಕ್ತಗೊಳಿಸಿ ತೀರ್ಪು ನೀಡಿದ್ದಾರೆ.

ಚಂದ್ರಶೇಖರ ಗೋರಬಾಳ್ ಯಾನೆ ತಿಪ್ಪೇಶ್, ನಂದ ಕುಮಾರ್, ದೇವೇಂದ್ರಪ್ಪ ಯಾನೆ ವಿಷ್ಣು ಯಾನೆ ದೇವಣ್ಣ ಹಾಗೂ ಆಶಾ ಯಾನೆ ಸುಧಾ ಯಾನೆ ಚಂದ್ರಾ ಯಾನೆ ಇಂದಿರಾ ಯಾನೆ ನಳಿನಿ ಯಾನೆ ಸಿಂಧು ಯಾನೆ ನಂದಿನಿ ಯಾನೆ ಪವಿತ್ರಾ ಆರೋಪಮುಕ್ತರಾದ ಶಂಕಿತ ನಕ್ಸಲರಾಗಿದ್ದಾರೆ.

2008 ರ ಮೇ 15 ರಂದು ಕಾರ್ಕಳ ತಾಲೂಕಿನ ಹೆಬ್ರಿ ಪೋಲೀಸ್ ಠಾಣಾ ವ್ಯಾಪ್ತಿಯ ನಾಡ್ಪಾಲು ಗ್ರಾಮದ ಸೀತಾನದಿ ಬಳಿಯ ಬಾಳುಬ್ಬೆ ನಿವಾಸಿ, ಸ್ಥಳೀಯ ಶಾಲಾ ಶಿಕ್ಷಕ ಮತ್ತು ಬಡ್ಡಿ ವ್ಯಾಪಾರಿ ಭೋಜ ಶೆಟ್ಟಿ ಹಾಗೂ ಇನ್ನೋರ್ವರನ್ನು ಗುಂಡು ಹಾರಿಸಿ ಹತ್ಯೆಗೈದ ಆರೋಪ ದೇವೇಂದ್ರಪ್ಪ, ನಂದ ಕುಮಾರ್, ಚಂದ್ರಶೇಖರ ಗೋರಬಾಳ್ ಹಾಗೂ ಆಶಾ ಇವರ ಮೇಲಿತ್ತು.

2003 ರ ನವೆಂಬರ್ ನಲ್ಲಿ ಈದು ರಾಮಪ್ಪ ಪೂಜಾರಿ ಎಂಬವರ ಮನೆಯಲ್ಲಿ ನಡೆದ ಪೋಲೀಸ್ ಕಾರ್ಯಾಚರಣೆಯಲ್ಲಿ ಪೊಲೀಸರು ನಕ್ಷಲ್ ನಾಯಕಿಯರಾದ ಹಾಜಿಮಾ ಹಾಗೂ ಪಾರ್ವತಿ ಅವರನ್ನು ಗುಂಡಿಟ್ಟು ಹತ್ಯೆ ಮಾಡಿದ್ದರು. ಯಶೋದಾ ಅವರನ್ನು ಗುಂಡಿನ ಗಾಯಗಳೊಂದಿಗೆ ಸೆರೆ ಹಿಡಿದಿದ್ದರು. ಈ ಸಂದರ್ಭದಲ್ಲಿ ಓರ್ವ ಯುವಕ ಓದಿ ಪರಾರಿಯಾಗಿದ್ದನು. ಇವರಲ್ಲಿ ಯಶೋದಾ ನ್ಯಾಯಾಲಯ ವಿಚಾರಣೆ ಎದುರಿಸಿ ಇದೀಗ ದೋಷಮುಕ್ತಿಗೊಂದಿದ್ದಾಳೆ. ಅಂದು ಓಡಿ ಪರಾರಿಯಾದ ಯುವಕನನ್ನು ವಿಷ್ಣು ಎಂದು ಗುರುತಿಸಲಾಗಿತ್ತು. ಬಳಿಕ ಪೋಲೀಸ್ ಬಂಧನಕ್ಕೆ ಒಳಗಾದ ದೇವೇಂದ್ರಪ್ಪ ಅವರೇ ವಿಷ್ಣು ಎಂದು ಗುರುತಿಸಲಾಗಿತ್ತು.

ಭೋಜ ಶೆಟ್ಟಿ ಹತ್ಯಾ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳ ಪರವಾಗಿ ಉಡುಪಿಯ ಹಿರಿಯ ಮತ್ತು ಪ್ರಸಿದ್ಧ ವಕೀಲರಾದ ಎಂ.ಶಾಂತಾರಾಮ ಶೆಟ್ಟಿ ವಾದಿಸಿದ್ದರು.

ಇಂದು ಖುಲಾಸೆಗೊಂಡವರಲ್ಲಿ ಆಶಾ ಅವರು ಈಗಾಗಲೇ ಜಾಮೀನಿನ ಮೇಲೆ ಬಿಡುಗಡೆಗೊಂಡಿದ್ದು, ಮುಖ್ಯ ವಾಹಿನಿಯಲ್ಲಿ ಸಹಜ ಜೀವನ ನಡೆಸುತ್ತಿದ್ದಾರೆ. ಪ್ರಸ್ತುತ ಮೈಸೂರು ಜೈಲಿನಲ್ಲಿ ನ್ಯಾಯಾಂಗ ಬಂಧನದಲ್ಲಿರುವ ಚಂದ್ರಶೇಖರ ಗೋರಬಾಳ್ ಅವರ ಮೇಲೆ ಬೇರೆ ಯಾವುದೇ ಪ್ರಕರಣವೂ ನ್ಯಾಯಾಲಯದಲ್ಲಿ ವಿಚಾರಣೆಗೆ ಬಾಕಿ ಇಲ್ಲದೇ ಇರುವುದರಿಂದ ಇನ್ನೋಂದೆರಡು ದಿನಗೋಳಗೆ ನ್ಯಾಯಾಂಗ ಬಂಧನದಿಂದ ಬಿಡುಗಡೆಗೊಳ್ಳಲಿದ್ದಾರೆ. ನಂದ ಕುಮಾರ್ ಹಾಗೂ ದೇವೇಂದ್ರಪ್ಪ ಇವರ ವಿರುದ್ಧ ಇನ್ನೂ ಕೆಲವು ಪ್ರಕರಣಗಳು ನ್ಯಾಯಾಲಯದಲ್ಲಿ ವಿಚಾರಣೆಗೆ ಬಾಕಿ ಇರುವುದರಿಂದ, ಇವರ ನ್ಯಾಯಾಂಗ ಬಂಧನ ಮುಂದುವರಿಯಲಿದೆ.

ಉಡುಪಿ: ಆವರಣ ಗೋಡೆಯಿಂದ ಬಿದ್ದು ಕೈ ಮೂಳೆ ಮುರಿತಕ್ಕೊಳಗಾದ, ಕಾರ್ಕಳ ತಾಲೂಕಿನ ಮುನಿಯಾಲಿನಲ್ಲಿರುವ ಹಿಂದುಳಿದ ವರ್ಗಗಳ ಮೆಟ್ರಿಕ್ ಪೂರ್ವ ವಿದ್ಯಾರ್ಥಿಗಳ ವಸತಿ ನಿಲಯದ ವಿದ್ಯಾರ್ಥಿ ತುರ್ತು ಚಿಕಿತ್ಸೆ ಒದಗಿಸದೆ ವಸತಿ ನಿಲಯದ ವಾರ್ಡನ್ ಹಾಗೂ ಅಡುಗೆ ಸಿಬ್ಬಂದಿ ನಿರ್ಲಕ್ಷಿಸಿ ಅಮಾನವೀಯತೆ ಮೆರೆದ ವಿದ್ಯಾಮಾನ ನಡೆದಿದೆ.

ಅಜೆಕಾರಿನ ಬಾಡಿಗೆ ಮನೆಯಲ್ಲಿ ವಾಸವಾಗಿರುವ ಸುರೇಶ್ ಎಂಬವರ ಪುತ್ರ ರಾಘವೇಂದ್ರ (11) ಎಂಬಾತ ವಸತಿ ನಿಲಯದಲ್ಲಿದ್ದು, ಆರನೇ ತರಗತಿ ಕಲಿಯುತ್ತಿದ್ದಾನೆ. ನವೆಂಬರ್ 9ರಂದು ಆದಿತ್ಯವಾರ ಸಂಜೆ 5 ಗಂಟೆ ಸುಮಾರಿಗೆ ಆವರಣ ಗೋಡೆ ಮೇಲೆ ಹಾಕಿದ್ದ ಬಟ್ಟೆಗಳನ್ನು ತೆಗೆಯಲೆಂದು ಗೋಡೆ ಹತ್ತಿದ ಸಮಯದಲ್ಲಿ ಕೆಳಗೆ ಬಿದ್ದು ರಾಘವೇಂದ್ರನ ಕೈ ಮೂಳೆ ಮುರಿದಿತ್ತು.

ಈ ಸಂದರ್ಭದಲ್ಲಿ ವಸತಿ ನಿಲಯದಲ್ಲಿ ಅಡುಗೆ ಸಿಬ್ಬಂದಿ ಭಾಸ್ಕರ್ ಎಂಬವರು ಇದ್ದರಾದರೂ ಅವರು ಯಾವುದೇ ಗಾಯಾಳು ವಿದ್ಯಾರ್ಥಿಗೆ ಯಾವುದೇ ತುರ್ತು ಚಿಕಿತ್ಸೆ ಒದಗಿಸಲು ಮುಂದಾಗಲಿಲ್ಲ. ಬದಲಾಗಿ ವಿಷಯವನ್ನು ವಾರ್ಡನ್ ಸಂತೋಷ್ ಅವರಿಗೆ ತಿಳಿಸಿ ಕೈ ತೊಳೆದುಕೊಂಡರೆನ್ನಲಾಗಿದೆ.

ಘಟನೆ ನಡೆದ ದಿನವೇ ವಿಷಯ ವಾರ್ಡನ್ ಸಂತೋಷ್ ಅವರ ಗಮನಕ್ಕೆ ಬಂದಿತ್ತಾದರೂ, ಅವರು ಸಹ ವಸತಿ ನಿಲಯಕ್ಕೆ ಬಂದು ಗಾಯಾಳು ವಿದ್ಯಾರ್ಥಿಯನ್ನು ಆಸ್ಪತ್ರೆಗೆ ಕರೆದೊಯ್ದು ಸೂಕ್ತ ಚಿಕಿತ್ಸೆ ಒದಗಿಸುವ ಪ್ರಾಥಮಿಕ ಕರ್ತವ್ಯವವನ್ನು ಸಹ ಅವರು ಮಾಡಲಿಲ್ಲವೆನ್ನಲಾಗಿದೆ. ಈ ವಸತಿ ನಿಲಯದ ಸಿಬ್ಬಂದಿಗಳು ಎಷ್ಟೊಂದು ಬೇಜವಾಬ್ದಾರರು ಎಂದರೆ, ಬಾಲಕ ಬಿದ್ದು ಕೈ ಮುರಿಸಿಕೊಂಡ ಬಗ್ಗೆ ಕನಿಷ್ಟ ಮಾಹಿತಿಯನ್ನೂ ಕೂಡಾ ಯಾರೊಬ್ಬರೂ ಬಾಲಕನ ಹೆತ್ತವರಿಗೆ ತಿಳಿಸಲಿಲ್ಲವೆಂದು ದೂರಲಾಗಿದೆ.

ಘಟನೆ ನಡೆದ ಮರುದಿನ ಮಧ್ಯಾಹ್ನದ ವರೆಗೂ ಗಾಯಾಳು ವಿದ್ಯಾರ್ಥಿಯನ್ನು ಕಡೆಗಣಿಸಿದ ವಸತಿ ನಿಲಯದ ಅಧಿಕೃತರು, ಮರುದಿನ ಅಪರಾಹ್ನ ಬಾಲಕನನ್ನು ಬೈಕೊಂದರಲ್ಲಿ ಕರೆದುಕೊಂಡು ಹೋಗಿ ತಂದೆ ಸುರೇಶ್ ಅವರ ಸ್ವಾಧೀನದಲ್ಲಿ ಬಿಟ್ಟು ಕೈ ತೊಳೆದುಕೊಂಡಿದ್ದಾರೆ. ಹೆತ್ತವರು ಸೋಮವಾರ ರಾತ್ರಿ ಗಾಯಾಳು ರಾಘವೇಂದ್ರನನ್ನು ಉಡುಪಿಯ ಅಜ್ಜರಕಾಡಿನಲ್ಲಿರುವ ಜಿಲ್ಲಾ ಸರಕಾರಿ ಆಸ್ಪತ್ರೆಗೆ ಕರೆತಂದು ಒಳರೋಗಿಯಾಗಿ ದಾಖಲಿಸಿದ್ದಾರೆ.

http://www.udupibits.in
# ಉಡುಪಿಯಲ್ಲಿ ರೇಷ್ಮೆ ಬೆಳೆಯತ್ತ ಆಕರ್ಷಿತರಾಗಿದ್ದಾರೆ ಹೊಸ ರೈತರು. ಕಳೆದ ಸಾಲಿನಲ್ಲಿ ಸುಮಾರು ಒಟ್ಟು 75 ಎಕರೆ ವಿಸ್ತೀರ್ಣದಲ್ಲಿ ವ್ಯಾಪಿಸಿದ್ದ ರೇಷ್ಮೆ, ಪ್ರಸಕ್ತ ಸಾಲಿನಲ್ಲಿ ಮತ್ತೆ ಹೊಸದಾಗಿ 12 ಎಕರೆ ಪ್ರದೇಶದಲ್ಲಿ ವ್ಯಾಪಿಸುವ ಮೂಲಕ ತನ್ನ ನೆಲೆಯನ್ನು ವಿಸ್ತರಿಸಿಕೊಳ್ಳುತ್ತಿದೆ.

ಉಡುಪಿ ಜಿಲ್ಲೆಯ 15 ಹೊಸ ರೈತರು ರೇಷ್ಮೆ ಕೃಷಿಯತ್ತ ಆಕರ್ಷಿತರಾಗಿದ್ದಾರೆ. ಕಾರ್ಕಳ ತಾಲೂಕಿನ ಮಾಳ, ಅಜೆಕಾರು, ಹೆಬ್ರಿ, ಮುದ್ರಾಡಿಯಲ್ಲಿ, ಕುಂದಾಪುರ ತಾಲೂಕಿನ ಅಜ್ರಿ, ಕೊಡ್ಲಾಡಿ, ಕರ್ಕುಂಜೆ, ಅಮಾಸೆಬೈಲು, ಕೆರಾಡಿ, ಮಾರಣಕಟ್ಟೆಯಂತಹ ಪ್ರದೇಶಗಳಲ್ಲಿ ರೇಷ್ಮೆ ಕೃಷಿಯತ್ತ ರೈತರು ವಾಲಿದ್ದಾರೆ.

ಅತ್ಯಂತ ವೈಜ್ಞಾನಿಕವಾಗಿ ಬೆಳೆಯುವ ಬೆಳೆ ರೇಷ್ಮೆ; ನಾಜೂಕಾದ ಈ ಬೆಳೆಯನ್ನು ರೇಷ್ಮೆ ಇಲಾಖೆಯ ಪರಿಣಿತರು ನೀಡಿದ ತರಬೇತಿ ಮತ್ತು ಮಾಹಿತಿಯಂತೆ ಬೆಳೆಯಬೇಕು.

ಇರುವೆ, ಜಿರಳೆಗಳ ಕಾಟ ಹಾಗೂ ಹೆಚ್ಚಿನ ಕಾಳಜಿ ಮತ್ತು ಜಾಗ್ರತೆ ರೇಷ್ಮೆ ಮೊಟ್ಟೆಯ ಬಗ್ಗೆ ರೈತರಿಗಿರಬೇಕು. ಉಡುಪಿಯಲ್ಲಿ 91 ರೈತ ಕುಟುಂಬ ರೇಷ್ಮೆ ಬೆಳೆಯಲ್ಲಿ ತಮ್ಮನ್ನು ತೊಡಗಿಸಿದ್ದು, ಹೆಚ್ಚಿನ ಕುಟುಂಬಗಳು ಪರಿಶಿಷ್ಟ ಪಂಗಡಕ್ಕೆ ಸೇರಿದವರದು.

ರೇಷ್ಮೆ ಇಲಾಖೆ ರೈತರಿಗೆ ವಿ 1 ತಳಿಯನ್ನು ಶಿಫಾರಸ್ಸು ಮಾಡಿದ್ದು, ಹೆಚ್ಚಿನ ಉತ್ಪಾದನೆ ಬರುವಂತೆ ನೋಡಿಕೊಂಡಿದ್ದಾರೆ. ಕಡಿಮೆ ಪ್ರದೇಶದಲ್ಲಿ ಹೆಚ್ಚಿನ ಇಳುವರಿ ತೆಗೆಯುವ ಬಗ್ಗೆ ಈಗಾಗಲೇ ಆಸಕ್ತ ರೈತರಿಗೆ ತರಬೇತಿ ನೀಡಿದೆ. ಐದು ದಿನಗಳ ಕಾಲ ತರಬೇತಿ ಮತ್ತು ಒಂದು ದಿನ ಮೈಸೂರಿನ ರೇಷ್ಮೆ ಬೆಳೆಯುವ ಪ್ರದೇಶಗಳಿಗೆ ಭೇಟಿ ನೀಡಿ ಪ್ರಾತ್ಯಕ್ಷಿಕೆ ಹಾಗೂ ಉಡುಪಿಯ ಯಶಸ್ವೀ ರೈತರ ಅನಿಸಿಕೆಗಳನ್ನು ಹಂಚಿಕೊಳ್ಳಲು ಹೊಸ ರೈತರಿಗೆ ಅವಕಾಶ ಮಾಡಿಕೊಡಲಾಗಿದೆ ಎನ್ನುತ್ತಾರೆ ರೇಷ್ಮೆ ಇಲಾಖೆ ಅಧಿಕಾರಿ ಉಪೇಂದ್ರ ನಾಯಕ್ ಅವರು.

ಉಡುಪಿಯಲ್ಲಿ ಕ್ಷೇತ್ರ ಮಟ್ಟದ ಅಧಿಕಾರಿಗಳ ಕೊರತೆ ಇದ್ದರೂ, ರೈತರ ಆಸಕ್ತಿಗೆ ಪೂರಕವಾಗಿ ಇಲಾಖೆ ಸ್ಪಂದಿಸುತ್ತಿರುವುದರಿಂದ ನೆಲೆ ವಿಸ್ತರಿಸುವಲ್ಲಿ ಉಡುಪಿಯಲ್ಲಿ ರೇಷ್ಮೆ ಯಶಸ್ಸು ಕಾಣುತ್ತಿದೆ.

ಉಡುಪಿ: ಉಡುಪಿ ಜಿಲ್ಲೆಯಲ್ಲಿ ಅಡಿಕೆ ಕೊಳೆ ರೋಗವನ್ನು ಹತೋಟಿ ಮಾಡಲು ಬೇರೆ ಬೇರೆ ಕಂಪೆನಿಗಳು ಸಾವಯವ ಸಸ್ಯ ಜನ್ಯ ಔಷಧಿಗಳನ್ನು ಬೇರೆ ಬೇರೆ ರೀತಿಯ ಅನೇಕ ಹೆಸರಿನಲ್ಲಿ (Bio-fite, Bio-pot, Agri-Biotech, Agri-foss, Agri-pos, Fito-Phose, Eco-Min, Pro-Alex, MCF, Beco-Min) ಮಾರುಕಟ್ಟೆಯಲ್ಲಿ ಅಧಿಕ ಪ್ರಮಾಣದಲ್ಲಿ ಮಾರಾಟ ಮಾಡುತ್ತಿದ್ದಾರೆ. ಈ ರೀತಿ ಮಾರಾಟ ಮಾಡುತ್ತಿರುವ ಔಷಧಿಯನ್ನು ರೈತರು ಸಿಂಪಡಿಸಿ ನಂತರದಲ್ಲಿ ಈ ರೀತಿ ಔಷಧಿಯನ್ನು ಸಿಂಪಡಿಸಿದ ತೋಟಗಳಲ್ಲಿ ಅಡಿಕೆ ಕಾಯಿಗಳು ಉದುರುವುದು, ಕೊಳೆಯುವುದು, ಒಡೆಯುವುದು, ಬೇಗ ಮಾಗುವುದು, ಈ ರೀತಿ ಸಮಸ್ಯೆಗಳು ಉಲ್ಬಣಿಸಿ ಅಡಿಕೆ ಬೆಳೆಗಾರರಿಗೆ ಇಳುವರಿ ಕಡಿಮೆಯಾಗಿ ನಷ್ಟವಾಗುತ್ತಿರುವ ಬಗ್ಗೆ ಅನೇಕ ರೈತರು ಹಾಗೂ ರೈತ ಮುಖಂಡರು ಇಲಾಖೆಗೆ ಮಾಹಿತಿ ನೀಡಿ ದೂರು ಸಲ್ಲಿಸಿರುತ್ತಾರೆ. ಈ ರೀತಿ ಸಾವಯವ ಸಸ್ಯ ಜನ್ಯ ಮೂಲ ಔಷಧಿಯನ್ನು ನಿಯಂತ್ರಿಸಲು ಯಾವುದೇ ರೀತಿಯ ನಿಯಮಗಳಿರುವುದಿಲ್ಲ. ಇಲಾಖೆ ಹಾಗೂ ಸಂಶೋಧನಾ ಸಂಸ್ಧೆಗಳು ಈ ರೀತಿ ಔಷಧಿಯನ್ನು ಉಪಯೋಗಿಸಬಾರದಾಗಿ ರೈತರಲ್ಲಿ ಈಗಾಗಲೇ ಅನೇಕ ಮನವಿ ಬಾರಿ ಮಾಡಿದೆ.ಈ ರೀತಿಯ ಔಷಧಿಗಳನ್ನು ಸಿಂಪಡಿಸಲು ಇಲಾಖಾ ಹಾಗೂ ಸಂಶೋಧನ ಸಂಸ್ಥೆಗಳು ಶಿಫಾರಸ್ಸು ಮಾಡಿರುವುದಿಲ್ಲ. ಇದರ ಬದಲಾಗಿ ಅಡಿಕೆ ಕೊಳೆ ರೋಗವನ್ನು ಸರ್ಮಪಕವಾಗಿ ನಿಯಂತ್ರಿಸಲು ಶೇ. 1 ರ ಬೋರ್ಡೋ ದ್ರಾವಣವನ್ನು ಸಿಂಪಡಿಸಲು ರೈತರಲ್ಲಿ ಮನವಿ ಮಾಡಲಾಗಿದೆ ಎಂದು ಇಲಾಖಾಧಿಕಾರಿಗಳು ತಿಳಿಸಿದ್ದಾರೆ.

ರೈತರು ಶೇ. 1 ರ ಬೋರ್ಡೋ ದ್ರಾವಣವನ್ನು ತಯಾರಿಸಲು 1 ಕೆ.ಜಿ. ಸುಣ್ಣ ಹಾಗೂ 1 ಕೆ.ಜಿ ಮೈಲುತುತ್ತನ್ನು ಮೊದಲಿಗೆ ತಲಾ 10 ಲೀ. ನೀರಿನಲ್ಲಿ ಬೇರೆ ಬೇರೆಯಾಗಿ ಕರಗಿಸಿ, ನಂತರ 80 ಲೀಟರ್ ನೀರುಳ್ಳ 1 ಡ್ರಮ್ಮಿಗೆ ಈ ಎರಡು ಕರಗಿದ ದ್ರಾವಣಗಳನ್ನು ಒಂದೇ ಸಮಯದಲ್ಲಿ ಮಿಶ್ರಣ ಮಾಡಿ ತಯಾರಿಸಬೇಕಾಗುತ್ತದೆ. ಈ ರೀತಿಯಾಗಿ ತಯಾರಿಸಿದ ಶೇ. 1 ರ ಬೋರ್ಡೋ ದ್ರಾವಣವನ್ನು ಅಡಿಕೆ ಮರದ ಗೊನೆಗಳು ಹಾಗೂ ಎಲೆಗಳ ಭಾಗಗಳು ಚೆನ್ನಾಗಿ ತೊಯ್ಯುವಂತೆ ಸಿಂಪಡಿಸಬೇಕು ಎಂದು ಪ್ರಕಟಣೆ ತಿಳಿಸಿದೆ.

http://www.udupibits.in news
ಉಡುಪಿ: ಒಂದು ವರ್ಷ ಎರಡು ತಿಂಗಳ ಬಳಿಕ ಉಡುಪಿ ಜಿಲ್ಲಾ ಸರಕಾರಿ ಆಸ್ಪತ್ರೆಯ ರಕ್ತನಿಧಿ ವಿಭಾಗದ ವೈದ್ಯಾಧಿಕಾರಿ ಡಾ.ಶರತ್ ಕುಮಾರ್ ರಾವ್ ಅವರ ಅಮಾನತು ಹಿಂತೆಗೆದುಕೊಂಡ ರಾಜ್ಯ ಸರಕಾರ, ಅವರನ್ನು ದೂರದ ಉತ್ತರ ಕರ್ನಾಟಕ ಪ್ರದೇಶದ ರಕ್ತನಿಧಿ ವಿಭಾಗವೇ ಇಲ್ಲದ ಗುಲ್ಬರ್ಗ ಜಿಲ್ಲೆಯ ಚಿಂಚೋಳಿ ತಾಲೂಕು ಸರಕಾರಿ ಆಸ್ಪತ್ರೆಗೆ ಶಿಕ್ಷಾರ್ಹ ವರ್ಗಾವಣೆ ಮಾಡಿರುವ ಕ್ರಮವನ್ನು ಖಂಡಿಸಿ ಮತ್ತು ಈ ವರ್ಗಾವಣೆಯನ್ನು ಹಿಂಪಡೆದುಕೊಂಡು ಮತ್ತೆ ಉಡುಪಿ ಜಿಲ್ಲಾಸ್ಪತ್ರೆಗೆ ಮರು ನೇಮಕ ಮಾಡುವಂತೆ ಆಗ್ರಹಿಸಿ ನವೆಂಬರ್ 15ರಂದು ಬೆಳಗ್ಗೆ ಗಂಟೆ 10ರಿಂದ ಸಂಜೆ ಗಂಟೆ 5ರ ವರೆಗೆ ಉಡುಪಿ ತಾಲೂಕು ಪಂಚಾಯತ್ ಕಾರ್ಯಾಲಯದ ಆವರಣದಲ್ಲಿರುವ ಉಡುಪಿ ವಿಧಾನಸಭಾ ಕ್ಷೇತ್ರದ ಶಾಸಕರಾದ ಪ್ರಮೋದ್ ಮಧ್ವರಾಜ್ ಅವರ ಕಚೇರಿ ಮುಂದೆ ಒಂದು ದಿನದ ಧರಣಿ ಸತ್ಯಾಗ್ರಹ ನಡೆಸಲು ಉಡುಪಿ ನಾಗರಿಕರ ವೇದಿಕೆ ನಿರ್ಧರಿಸಿದೆ.

ವೇದಿಕೆಯ ಅಧ್ಯಕ್ಷರಾದ ಖ್ಯಾತ ಮನೋವೈದ್ಯ ಡಾ.ಪಿ.ವಿ.ಭಂಡಾರಿಯವರ ಅಧ್ಯಕ್ಷತೆಯಲ್ಲಿ ಇತ್ತೀಚೆಗೆ ಉಡುಪಿಯಲ್ಲಿ ನಡೆದ ವೇದಿಕೆ ಪ್ರಮುಖರ ಸಭೆಯಲ್ಲಿ ಈ ಬಗ್ಗೆ ನಿರ್ಣಯ ತೆಗೆದುಕೊಳ್ಳಲಾಯಿತು.

ಉಡುಪಿ ಜಿಲ್ಲಾಸ್ಪತ್ರೆ, ಜಿಲ್ಲಾ ಕೇಂದ್ರವಾಗಿರುವ ಉಡುಪಿಯಲ್ಲಿ ಇರುವುದರಿಂದ; ಈ ಪ್ರಕ್ರಿಯೆಯಲ್ಲಿ ಜಿಲ್ಲಾ ಕೇಂದ್ರದ ಶಾಸಕರಾದ ಪ್ರಮೋದ್ ಮಧ್ವರಾಜ್ ಅವರ ಪಾತ್ರ ಪ್ರಮುಖವಾದುದು ಎಂಬ ಅಭಿಪ್ರಾಯದ ಹಿನ್ನೆಲೆಯಲ್ಲಿ ಹೋರಾಟದ ಮೊದಲ ಹಂತವಾಗಿ ನ.15ರಂದು ಶನಿವಾರ ಒಂದು ದಿನದ ಧರಣಿ ಸತ್ಯಾಗ್ರಹ ನಡೆಸಲು ಸಭೆಯಲ್ಲಿ ಒಕ್ಕೊರಲ ತೀರ್ಮಾನ ತೆಗೆದುಕೊಳ್ಳಲಾಯಿತು.

ಡಾ.ಶರತ್ ಕುಮಾರ್ ರಾವ್ ಜಿಲ್ಲಾಸ್ಪತ್ರೆಯಲ್ಲಿ ಸೇವೆ ಸಲ್ಲಿಸುತ್ತಿರುವ ಅವಧಿಯಲ್ಲಿ ವಾರ್ಷಿಕ 9 ಸಾವಿರಕ್ಕೂ ಅಧಿಕ ಯುನಿಟ್ ರಕ್ತ ಸಂಗ್ರಹವಾಗುತ್ತಿದ್ದರೆ, ಇದೀಗ ಈ ಸಂಗ್ರಹ 5 ಸಾವಿರಕ್ಕಿಂತಲೂ ಕಡಿಮೆಯಾಗಿದೆ ಎಂಬ ಅಂಶ ಸಭೆಯಲ್ಲಿ ಚರ್ಚೆಗೆ ಬಂತು. ಉಡುಪಿ ನಾಗರಿಕರ ವೇದಿಕೆ ನಡೆಸುತ್ತಿರುವ ಹೋರಾಟ ಕೇವಲ ಡಾ.ಶರತ್ ಕುಮಾರ್ ಅವರ ಪರವಾದುದಷ್ಟೇ ಅಲ್ಲದೆ, ಇದು ಉಡುಪಿ ಜಿಲ್ಲಾ ಸರಕಾರಿ ಆಸ್ಪತ್ರೆಯಲ್ಲಿರುವ ರಕ್ತನಿಧಿ ವಿಭಾಗವನ್ನು ಉಳಿಸುವ ಒಂದು ಹೋರಾಟವೂ ಆಗಿದೆ ಎನ್ನುವ ವಿಷಯವನ್ನೂ ಸಭೆ ಅಂಗೀಕರಿಸಿತು.

ಡಾ.ಶರತ್ ಕುಮಾರ್ ರಾವ್ ಅವರು ಓರ್ವ ಪೆಥೋಲಜಿಸ್ಟ್ ಆಗಿದ್ದು, ಅವರನ್ನು ರಕ್ತನಿಧಿ ವಿಭಾಗವೇ ಇಲ್ಲದ ದೂರದ ಗುಲ್ಬರ್ಗ ಜಿಲ್ಲೆಯ ಚಿಂಚೋಳಿ ತಾಲೂಕು ಆಸ್ಪತ್ರೆಗೆ ವರ್ಗಾವಣೆ ಮಾಡಿರುವುದು ಧ್ವೇಷದಿಂದಲ್ಲದೆ ಬೇರೇನೂ ಅಲ್ಲ ಎನ್ನುವ ಅಭಿಪ್ರಾಯವೂ ಸಭೆಯಲ್ಲಿ ವ್ಯಕ್ತಗೊಂಡಿತು.

ನವೆಂಬರ್ 15ರ ಹೋರಾಟವನ್ನು ಮುಂದಿನ ದಿನಗಳಲ್ಲಿ ಉಡುಪಿ ನಗರಸಭೆಯ 35 ವಾರ್ಡ್ ಗಳಲ್ಲಿ ಮತ್ತು ಉಡುಪಿ ತಾಲೂಕಿನಾದ್ಯಂತದ ಎಲ್ಲಾ ಹೋಬಳಿ ಕೇಂದ್ರಗಳಿಗೆ ವಿಸ್ತರಿಸಲು ಸಭೆಯಲ್ಲಿ ನಿರ್ಣಯಿಸಲಾಯಿತು.

ನ.15ರ ಧರಣಿ ಸತ್ಯಾಗ್ರಹದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಡಾ.ಪಿ.ವಿ.ಭಂಡಾರಿ ನಾಗರಿಕರಲ್ಲಿ ವಿನಂತಿಸಿಕೊಂಡಿದ್ದಾರೆ.

ಉಡುಪಿ: ಇಂಡಿಯನ್ ರೆಡ್ ಕ್ರಾಸ್ ಸೊಸೈಟಿಗೆ ಸೇರಿದ ಮಂಗಳೂರು ನಗರದ ಲೇಡಿಗೋಷನ್ ಆಸ್ಪತ್ರೆಯಲ್ಲಿರುವ ರಕ್ತನಿಧಿ (ಬ್ಲಡ್ ಬ್ಯಾಂಕ್)ಯ ಸಂಗ್ರಹದಲ್ಲಿದ್ದ
ಸಾರ್ವಜನಿಕರಿಂದ ಸಂಗ್ರಹಿಸಲಾದ 43 ಯುನಿಟ್ ರಕ್ತ ಚರಂಡಿಗೆ ಎಸೆಯಲಾದ ದುರಂತ ವಿದ್ಯಾಮಾನವೊಂದು ನಡೆದಿದೆ.

ರಾಜ್ಯದ ಆರೋಗ್ಯ ಸಚಿವ ಯು.ಟಿ.ಖಾದರ್ ಅವರ ಊರಿನಲ್ಲಿಯೇ, ರಾಜ್ಯ ಸರಕಾರದ ಅಧೀನದಲ್ಲಿರುವ ರೆಡ್ ಕ್ರಾಸ್ ಸೊಸೈಟಿಗೆ ಸೇರಿದ ಬ್ಲಡ್ ಬ್ಯಾಂಕ್ ನ ರಕ್ತ ಚರಂಡಿಗೆಸೆಯಲ್ಪಟ್ಟಿರುವುದು ವಿಪರ್ಯಾಸವೇ ಸರಿ.

43 ಯುನಿಟ್ ರಕ್ತವನ್ನು ಈಗಾಗಲೇ ಚರಂಡಿಗೆ ಹರಿಯಬಿಡಲಾಗಿದ್ದರೆ, 47 ಯುನಿಟ್ ರಕ್ತವನ್ನು ಇನ್ನು ಒಂದೆರಡು ದಿನಗಳಲ್ಲಿ ಚರಂಡಿಗೆ ಹರಿಯಬಿಡಲು ಸಿದ್ದತೆ
ನಡೆಸಲಾಗಿತ್ತು ಎಂದು ಹೇಳಲಾಗಿದೆ.

ಅತ್ಯಮೂಲ್ಯವಾಗಿರುವ ರಕ್ತವನ್ನು ಹೀಗೆ ಚರಂಡಿಗೆ ಸೆಯುವುದು ಅಕ್ಷಮ್ಯ ಅಪರಾಧವಾಗಿದೆ. ಇದಕ್ಕೆ ಕಾರಣರಾದವರ ವಿರುದ್ಧ ಸರಕಾರ ಐಪಿಸಿ ಕಲಂ ಪ್ರಕಾರ ಕ್ರಿಮಿನಲ್ ಮೊಕದ್ದಮೆ ದಾಖಲಿಸಿ ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸುವುದು ಅನಿವಾರ್ಯವಾಗಿದೆ. ಈ ಬಗ್ಗೆ ಮಂಗಳೂರಿನವರೇ ಆಗಿರುವ ಸಚಿವ ಖಾದರ್ ಪೊಲೀಸರಿಗೆ ಆದೇಶಿಸುವುದು ಅತೀ ಅಗತ್ಯವಾಗಲಿದೆ. ಇದನ್ನು ಸಚಿವರು ಮಾಡದೇ ಇದ್ದಲ್ಲಿ ಸಚಿವರು ಆರೋಪಿಗಳನ್ನು ರಕ್ಷಿಸದಂತಾಗಲಿದೆ.

ಚರಂಡಿಗೆಸೆಯಲಾದ ರಕ್ತ ರೆಡ್ ಕ್ರಾಸ್ ಸೊಸೈಟಿಗೆ ಸೇರಿದ್ದು, ಆರೋಗ್ಯ ಸಚಿವ ಯು.ಟಿ.ಖಾದರ್ ಅವರು ಕೂಡಲೇ ರೆಡ್ ಕ್ರಾಸ್ ಸೊಸೈಟಿಯ ಬ್ಲಡ್ ಬ್ಯಾಂಕ್ ಅಧಿಕಾರಿಯನ್ನು ಅಮಾನತುಗೊಳಿಸಬೇಕಾಗುತ್ತದೆ.

ದಕ್ಷ ಮತ್ತು ಪ್ರಾಮಾಣಿಕ ವೈದ್ಯಾಧಿಕಾರಿಗಳನ್ನು ಸುಳ್ಳು ದೂರಿನಡಿಯಲ್ಲಿ ಅಮಾನತು ಮಾಡುವ, ಸರಕಾರಿ ರಕ್ತನಿಧಿಯನ್ನು ನಾಶಗೊಳಿಸಿ, ಖಾಸಗಿ ಬ್ಲಡ್ ಬ್ಯಾಂಕ್ ಗಳನ್ನು ಪೋಷಿಸುವ ರಾಜ್ಯ ಸರಕಾರ ಮತ್ತು ರಾಜ್ಯದ ಆರೋಗ್ಯ ಸಚಿವ ಯು.ಟಿ.ಖಾದರ್, ಆರೋಗ್ಯ ಇಲಾಖೆಯ ಮಾಜಿ ಪ್ರಧಾನ ಕಾರ್ಯದರ್ಶಿ ಮದನ್ ಗೋಪಾಲ್ ಐಎಎಸ್, ಹಾಲಿ ಪ್ರಧಾನ ಕಾರ್ಯದರ್ಶಿ ಎನ್.ಶಿವಶೈಲಂ ಮೊದಲಾದವರು ನೀತಿಗಳೇ, ಪ್ರಸ್ತುತ ಸಾರ್ವಜನಿಕರಿಂದ ಸಂಗ್ರಹಿಸಲಾದ ಜೀವ ರಕ್ಷಕ ರಕ್ತ ಚರಂಡಿಗೆಸೆಯಲ್ಪಡಲು ಮೂಲ ಕಾರಣವೆನ್ನಲಾಗಿದೆ.

# http://www.udupibits.in news * ಶ್ರೀರಾಮ ದಿವಾಣ.
ಉಡುಪಿ: ಸನ್ಯಾಸಾಶ್ರಮ ಸ್ವೀಕರಿಸಿ ಮಠಾಧೀಶರಾದವರು ವರ್ಷಕ್ಕೊಂದೊಂದು ಬಾರಿ ಎರಡು ತಿಂಗಳ ಕಾಲ ‘ಚಾತುರ್ಮಾಸ ವೃತ’ ಪಾಲಿಸುವುದು ಹೊಸ ವಿಷಯವವೂ ಅಲ್ಲ, ವಿಶೇಷವೂ ಅಲ್ಲ. ಆದರೆ, ಸನ್ಯಾಸಿಯೂ ಅಲ್ಲದ, ಮಠಾಧೀಶರೂ ಅಲ್ಲದ, ವೃತ್ತಿಯಲ್ಲಿ ಚಾಲಕರಾದ ವ್ಯಕ್ತಿಯೊಬ್ಬರು ‘ಚಾತುರ್ಮಾಸ ವೃತ’ಕ್ಕೆ ಅನ್ವರ್ಥವಾಗಿ ಸರಿಯಾಗಿ ನಾಲ್ಕು ತಿಂಗಳ ಕಾಲ ‘ಚಾತುರ್ಮಾಸ ವೃತ’ ಆಚರಿಸುತ್ತಿರುವುದು ಆಶ್ಚರ್ಯವೇ ಸರಿ.

ಆಡಳಿತಾತ್ಮಕವಾಗಿ ಕೇರಳ ರಾಜ್ಯದಲ್ಲಿರುವ ಗಡಿನಾಡು ಮತ್ತು ಕನ್ನಡನಾಡು ಆಗಿರುವ ಕಾಸರಗೋಡು ಜಿಲ್ಲೆಯ ಕುಂಬಳೆ ಸೀಮೆಯ ಎಡನಾಡು ಗ್ರಾಮದ ಸೂರಂಬೈಲಿನ ಬಾಡಿಗೆ ರೂಮಿನಲ್ಲಿ ವಾಸವಾಗಿರುವ ಸತ್ಯ ನಾರಾಯಣ ಅವರು 2014ರ ಚಾತುರ್ಮಾಸವನ್ನು ಪರಿಸಮಾಪ್ತಿಗೊಳಿಸಿ ಸೀಮೋಲ್ಲಂಘನೆ ಪ್ರಕ್ರಿಯೆಯನ್ನೂ ಮುಕ್ತಾಯಗೊಳಿಸಿ ಮತ್ತೆ ಎಂದಿನಂತೆ ತಮ್ಮ ಚಾಲಕ ವೃತ್ತಿಯನ್ನು ಆರಂಭಿಸಿದ್ದಾರೆ.

ಅಧ್ಯಾತ್ಮದಲ್ಲಿ ಆಸಕ್ತರಾಗಿರುವ ಸತ್ಯ ನಾರಾಯಣ ಅವರು, ನಾಲ್ಕು ವರ್ಷಗಳ ಹಿಂದೆಯೇ ‘ಚಾತುರ್ಮಾಸ ವೃತ’ ಆರಂಭಿಸಿದ್ದಾರೆ. ಆದರೆ, ಮೊದಲ ಎರಡು ವರ್ಷಗಳ ಕಾಲ ಕೇವ ಎರಡು ತಿಂಗಳ ಅವಧಿಯ ‘ಚಾತುರ್ಮಾಸ ವೃತ’ ಪಾಲಿಸಿದ ಇವರು, ಭಗವಾನ್ ಶ್ರೀಧರ ಗುರುಗಳಿಗೆ ಸಂಬಂಧಿಸಿದ ಗ್ರಂಥವೊಂದನ್ನು ಓದಿದ ಬಳಿಕ ನಾಲ್ಕು ತಿಂಗಳ ಕಾಲದ ‘ಚಾತುರ್ಮಾಸ ವೃತ’ ಪಾಲಿಸಿಕೊಂಡು ಬರುತ್ತಿದ್ದಾರೆ.

ಈ ವರ್ಷದ ಚಾತುರ್ಮಾಸ ವೃತವನ್ನು ಜುಲೇ 12ರಂದು ಆರಂಭಿಸಿದ ಸತ್ಯ ನಾರಾಯಣ ಅವರು, ನವೆಂಬರ್ 3ರಂದು ಪರಿಸಮಾಪ್ತಿಗೊಳಿಸಿದ್ದಾರೆ. ನವೆಂಬರ್ 4ರಂದು ಸೀಮೋಲ್ಲಂಘನೆ ಮಾಡಿದ್ದಾರೆ. ಉಡುಪಿಯ ಅಂಬಲಪಾಡಿ ಶ್ರೀ ಮಹಾಕಾಳಿ ಮತ್ತು ಜನಾರ್ದನ ದೇವಸ್ಥಾನ, ಶಿರಸಿಯ ಶ್ರೀ ಮಾರಿಕಾಂಬೆ ದೇವಸ್ಥಾನ, ಬನವಾಸಿಯ ಶ್ರೀ ಮಧುಕೇಶ್ವರ ದೇವಸ್ಥಾನ, ಸೋಂದಾದ ಶ್ರೀ ವಾದಿರಾಜ ಮಠ, ತ್ರಿವಿಕ್ರಮ ದೇವಸ್ಥಾನ, ಸ್ವರ್ಣವಲ್ಲಿ ಮಠ, ಉಡುಪಿಯ ಕುಂಜಾರುಗಿರಿ ಶ್ರೀ ದುರ್ಗಾ ದೇವಿ ದೇವಸ್ಥಾನ, ಶ್ರೀ ಪರಶುರಾಮ ದೇವಸ್ಥಾನ, ಉದ್ಯಾವರದ ಶ್ರೀ ವೀರಭದ್ರ, ಮಹಾಕಾಳಿ, ದುರ್ಗಾಪರಮೇಶ್ವರಿ ದೇವಸ್ಥಾನ ಮತ್ತು ಶ್ರೀ ಪಂಜುರ್ಲಿ ದೈವಸ್ಥಾನಗಳ ದರ್ಶನದೊಂದಿಗೆ ಸೀಮೋಲ್ಲಂಘನೆ ಕಾರ್ಯಕ್ರಮವನ್ನು ಮುಕ್ತಾಯಗೊಳಿಸಿದ್ದಾರೆ.
tags: ಸತ್ಯ ನಾರಾಯಣ, ಎಡನಾಡು, ಕುಂಬಳೆ, ಸೀಮೆ, ಕಾಸರಗೋಡು, ಮಹಾಜನ ವರದಿ, ಕನ್ನಡ, ಕನ್ನಡನಾಡು, ಗಡಿನಾಡು, ಕುಂಬಳೆ ಸೀಮೆ, ಸೀಮೋಲ್ಲಂಘನೆ, ಚಾತುರ್ಮಾಸ, ಸ್ವಾಮೀಜಿ, ಸನ್ಯಾಸಿ, ಸನ್ಯಾಸಾಶ್ರಮ, ಮಠಗಳು, ಮಠಾಧೀಶರು, ಹವ್ಯಕ, ಬ್ರಾಹ್ಮಣರು, ಭಗವಾನ್ ಶ್ರೀಧರ ಗುರುಗಳು, ಉಡುಪಿ, ಶ್ರೀ ಮಹಾಕಾಳಿ ಮತ್ತು ಜನಾರ್ದನ ದೇವಸ್ಥಾನ ಅಂಬಲಪಾಡಿ, ಶಿರಸಿ, ಶ್ರೀ ಮಾರಿಕಾಂಬಾ ದೇವಸ್ಥಾನ ಶಿರಸಿ, ಶ್ರೀ ಮಧುಕೇಶ್ವರ ದೇವಸ್ಥಾನ ಬನವಾಸಿ, ಬನವಾಸಿ, ಸೋಂದಾ, ಶ್ರೀ ಸೋದೆ ವಾದಿರಾಜ ಮಠ ಸೋಂದಾ, ತ್ರಿವಿಕ್ರಮ ದೇವಸ್ಥಾನ ಸೋಂದಾ, ಸ್ವರ್ಣವಲ್ಲಿ, ಸ್ವರಣವಲ್ಲಿ ಮಠ, ಶ್ರೀ ಸೋಂದಾ ಸ್ವರ್ಣವಲ್ಲಿ ಮಹಾಸಂಸ್ಥಾನ, ಶ್ರೀ ದುರ್ಗಾ ದೇವಿ ದೇವಸ್ಥಾನ ಕುಂಜಾರುಗಿರಿ, ಶ್ರೀ ಶಂಭುಕಲ್ಲು ದೇವಸ್ಥಾನ ಉದ್ಯಾವರ, shambhukallu temple udyavara, durgadevi temple kunjarugiri, parasurama temple kunjarugiri, udupi, mahakali and janardana temple ambalapady udupi, marikamba temple sirsi, madhukeshwara temple banavasi, sode vadiraja matha sonda, swarnavalli mahasamsthanam sonda, sathya narayana, chathurmasa, bhagavan sridhara swamy, udupibits]

Bengaluru: The Health Department has finally reinstated Dr Sharat Rao, the pathologist from Udupi who blew the whistle on a scam last year in the purchase of medical equipment and chemicals in district and taluk hospitals, but not without controversy.

After Dr Sharat exposed the scam in April 2013, the department placed him under suspension in September 2013 based on an unrelated private complaint by a woman. On Thursday, it reinstated him with a note “pending enquiry”. The enquiry is yet to begin. But his reinstatement has raised suspicion as he has been transferred to Chincholi in Gulbarga at a time when the Lokayukta police, who are probing into the scam, have considered him the prime witness in the case.

Dr Sharat, along with another pathologist Dr Veena Rao, had sent an e-mail to the then Principal Secretary of Health Department Madan Gopal, detailing the scam in the purchase of lab equipment and chemicals. Although a vigilance officer appointed thereafter submitted a report confirming the scam, no action was taken. However, the then principal secretary suspended Dr Sharat on September 07, 2013, based on a complaint of cheating but did not conduct any enquiry.

A woman had filed a complaint with the principal secretary alleging that Dr Sharat had not repaid a loan to her. “Dr Rao did not receive even the part salary he is entitled to. When we protested against this harassment to a whistleblower, Udupi district in-charge minister Vinay Kumar Sorake assured that justice will be done. The local MLA had also promised to take issue with the chief minister. The Health Department created a critical vacancy for a pathologist at the Udupi District Hospital only to shut the door on Dr Sharat,” said Dr P V Bhandary, who is spearheading a movement to protect whistleblowers.

“And, now this transfer to a place where there is no post of a pathologist shows that the department wants to silence him. He could have been transferred to a hospital where there is vacancy for a pathologist.”

While the whistleblower in this scam has been sent on “punishment transfer”, the government seems to be protecting the alleged scamsters. In July this year, the Lokayukta police had recommended suspension of three officials at the Udupi District Hospital for their alleged involvement in the scam. But the three officials – Office Superintendent Mohandas Kini, Gazetted Assistant Kumaraswami and District Surgeon Dr Anand Nayak—continue to report for work.

The scam is about irregularities in the purchase of machines and chemicals for laboratories. The pathologists had alleged that the tender process was of a questionable nature and facilitated the suppliers to make huge profits at the expense of the exchequer and poor patients.
[by: DHNS, 06.11.2014)

ಕಾರ್ಕಳ: ವೈದ್ಯ ಲೋಕಕ್ಕೆ ಸವಾಲಾಗಿ ಮನೆಯಲ್ಲೇ ನರಳಾಟ ನಡೆಸುತ್ತಿರುವ ಬಡ ಕುಟುಂಬದ ಮೂವರು ಹೆಣ್ಣು ಮಕ್ಕಳು ವಿಚಿತ್ರ ಕಾಯಿಲೆಗೆ ತುತ್ತಾಗಿ ಸಾವು ಬದುಕಿನ ಮಧ್ಯೆ ಹೋರಾಟ ನಡೆಸುತ್ತಿರುವ ಚಿಂತಾಜನಕ ಕಥೆಯಿದು.

ಕಾರ್ಕಳ ತಾಲೂಕಿನ ಈದು ಗ್ರಾ.ಪಂ. ವ್ಯಾಪ್ತಿಯ ನೂರಳ್ಬೆಟ್ಟುವಿನ ಕನ್ಯಾಲು ಎಂಬಲ್ಲಿನ ಕುದುರೆಮುಖ ವನ್ಯಜೀವಿ ಸಂರಕ್ಷಣಾ ಅಭಯಾರಣ್ಯದ ಸೀಮೆಗೆ ತಾಗಿರುವ ದಿ.ಕೊರಗ ಮಲೆಕುಡಿಯರ ಪತ್ನಿ ಶ್ರೀಮತಿ ಚೆನ್ನಮ್ಮ (57), ಇವರ ಮಕ್ಕಳಾದ ಕು.ವನಜಾ (33), ಕು.ಸುರೇಖಾ (21) ಹಾಗೂ ಕು.ಸುಗುಣಾ (20) ಎಂಬವರೇ ವಿಚಿತ್ರ ಕಾಯಿಲೆಯಿಂದ ನರಳುತ್ತಿರುವ ನತದೃಷ್ಠೆಯರು.

ಕಳೆದ ಆರು ವರ್ಷದ ಹಿಂದೆ ಒಬ್ಬರ ನಂತರ ಒಬ್ಬರಿಗೆ ಹಠಾತ್ತನೆ ಈ ರೋಗ ತಗುಲಿದ್ದು, ರೋಗದ ಹುಟ್ಟು ಪತ್ತೆಯಾಗದೆ ವೈದ್ಯಲೋಕಕ್ಕೆ ಸವಾಲಾಗಿತ್ತು. ಚೆನ್ನಮ್ಮರ ಗಂಡ 45ನೇ ವಷಕ್ಕೆ ಇದೇ ರೋಗಕ್ಕೆ ತುತ್ತಾಗಿ ಚಿಕಿತ್ಸೆಗೆ ಸ್ಪಂಧಿಸದೆ 50ನೇ ವರ್ಷದಲ್ಲಿ ಸಾವನ್ನಪ್ಪಿದ್ದರು. ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಕೊಡಿಸಲಾಗಿತ್ತಾದರೂ ಗುಣಮುಖವಾಗುವ ಲಕ್ಷಣ ಕಾಣಲಿಲ್ಲ. ಬುದ್ದಿಮಾಂದ್ಯತೆ, ಅಂಗನೂನ್ಯತೆಯಿಂದ ಬಳಲುತ್ತಿರುವ ಇವರು ಮಲಗಿದಲ್ಲಿಯೇ ತಲೆಯನ್ನು ಗೋಡೆಗೆ ಹೊಡೆದು ಒರಳಾಟ ನಡೆಸುತ್ತಿರುವ ದೃಶ್ಯವು ಮನಕಲಕುವಂತದ್ದು.

ಇರುವ ಒಬ್ಬ ಮಗನಿಂದ ಕುಟುಂಬ ನಿರ್ವಹಣೆ ನಡೆಯುತ್ತಿದ್ದು, ತಾಯಿ, ರೋಗಿಗಳ ಸೇವೆಯಲ್ಲೇ ನಿರತರಾಗಿದ್ದಾರೆ. ಕುಗ್ರಾಮವಾದ ಈ ಹಳ್ಳಿಯಲ್ಲಿ ಮೂಲಭೂತ ಸೌಕರ್ಯಗಳು
ಮರೀಚಿಕೆಯಾಗಿದೆ. ಯಾವುದೇ ಮನೆ ಸಾಮಾಗ್ರಿಗಳನ್ನು ತರಬೇಕಾದರೆ 12 ಕಿ.ಮೀ. ದೂರದ ಹೊಸ್ಮಾರಿಗೆ ಹೋಗಬೇಕು. ಮನೆಯಿಂದ 4 ಕಿ.ಮೀ. ದೂರದವರೆಗೆ ಯಾವುದೇ ವಾಹನ ಸಂಚಾರವಿಲ್ಲ. ಕಾರಣ ತೀರಾ ಕಾಡು ಪ್ರದೇಶ ಮತ್ತು ಅರಣ್ಯ ಸಂರಕ್ಷಿತ ಪ್ರದೇಶವಾದ್ದರಿಂದ ಮಾರ್ಗದ ವ್ಯವಸ್ಥೆಯಿಂದ ವಂಚಿತರಾಗಿದ್ದಾರೆ. ಹೀಗಾಗಿ ಅನಾರೋಗ್ಯ ಭಾದಿತರ ಬದುಕು
ಕರುಣಾಜನಕವಾಗಿದೆ.

ಚಿಕಿತ್ಸೆ ಹಾಗೂ ಪುನರ್ವಸತಿಗೆ ಒತ್ತಾಯ

ಶ್ರೀಗುರು ಚೈತನ್ಯ ಸೇವಾ ಪ್ರತಿಷ್ಠಾನದ ಅಧ್ಯಕ್ಷ ಹೊನ್ನಯ್ಯ ಕಾಟಿಪಳ್ಳ ಅವರು ವಿಚಿತ್ರ ರೋಗದಿಂದ ಬಳಲುತ್ತಿರುವ ಕುಟುಂಬಕ್ಕೆ ಚಿಕಿತ್ಸೆ ಹಾಗೂ ಪುನರ್ವಸತಿ ಕಲ್ಪಿಸುವಂತೆ ಒತ್ತಾಯಿಸಿ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ. ಖಾದರ್, ಉಡುಪಿ ಜಿಲ್ಲಾಧಿಕಾರಿಗಳು, ಕಾರ್ಕಳ ಕ್ಷೇತ್ರದ ಶಾಸಕರಾದ ಸುನಿಲ್ ಕುಮಾರ್ ಹಾಗೂ ನ.6ರಂದು ಉಡುಪಿಯ ಜಿಲ್ಲಾಡಳಿತ ಕಚೇರಿ ಸಭಾಂಗಣದಲ್ಲಿ ಜರುಗಿದ ಜನತಾ ದರ್ಶನ ಕಾರ್ಯಕ್ರಮದಲ್ಲಿ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ವಿನಯ ಕುಮಾರ್ ಸೊರಕೆ ಅವರಿಗೆ ಮನವಿ ಸಲ್ಲಿಸಿದ್ದಾರೆ.

# http://www.udupibits.in news * ಶ್ರೀರಾಮ ದಿವಾಣ.
ಉಡುಪಿ: ನಕಲಿ ಸಹಿಯಿಂದೊಡಗೂಡಿದ ನಕಲಿ ಅಗ್ರಿಮೆಂಟ್ ದಾಖಲೆಯ ಆಧಾರದಲ್ಲಿ ಮಹಿಳೆಯೊಬ್ಬರು ನೀಡಿದ ಸುಳ್ಳು ದೂರಿನಡಿಯಲ್ಲಿ ಪಕ್ಷಪಾತ ಮತ್ತು ಅಸಮರ್ಪಕತೆಯಿಂದ ಕೂಡಿದ ಅವೈಜ್ಞಾನಿಕ ತನಿಖಾ ವರದಿಯಂತೆ ಒಂದು ವರ್ಷ ಎರಡು ತಿಂಗಳ ಹಿಂದೆ ಅನ್ಯಾಯವಾಗಿ ಅಮಾನತುಗೊಂಡ ಉಡುಪಿ ಜಿಲ್ಲಾ ಸರಕಾರಿ ಆಸ್ಪತ್ರೆಯ ರಕ್ತನಿಧಿ ವಿಭಾಗದ ವೈದ್ಯಾಧಿಕಾರಿ ಡಾ.ಶರತ್ ಕುಮಾರ್ ಅವರ ಅಮಾನತು ಆದೇಶವನ್ನು ಹಿಂತೆಗೆದುಕೊಂಡಿರುವ ರಾಜ್ಯ ಸರಕಾರ, ತಕ್ಷಣದಿಂದಲೇ ಜ್ಯಾರಿಗೆ ಬರುವಂತೆ ಗುಲ್ಬರ್ಗ ಜಿಲ್ಲೆಯ ಚಿಂಚೋಳಿ ತಾಲೂಕು ಆಸ್ಪತ್ರೆಗೆ ವರ್ಗಾಯಿಸಿ ಆದೇಶ ಹೊರಡಿಸಿದೆ ಎಂದು ತಿಳಿದುಬಂದಿದೆ.

ರಾಜ್ಯದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಡಿಯಲ್ಲಿ ನಡೆದ ಬಹುಕೋಟಿ ರಾಸಾಯನಿಕ ಹಗರಣದ ಬಗ್ಗೆ ಇಲಾಖೆಯ ಅಂದಿನ ಪ್ರಧಾನ ಕಾರ್ಯದರ್ಶಿಯಾಗಿದ್ದ ಮದನ್ ಗೋಪಾಲ್ ಐಎಎಸ್ ಅವರಿಗೆ ಕಳೆದ ವರ್ಷದ ಮಾರ್ಚ್ ನಲ್ಲಿ ಡಾ.ಶರತ್ ಕುಮಾರ್ ರಾವ್ ಅವರು ದೂರು ನೀಡಿದ್ದೇ, ಬಳಿಕ ಅವರ ಮೇಲೆಯೇ ಮಹಿಳೆಯೊಬ್ಬರು ಸುಳ್ಳು ದೂರು ನೀಡಲು, ಅವರು ಅಮಾನತುಗೊಂಡು ಒಂದು ವರ್ಷ ಎರಡು ತಿಂಗಳ ಕಾಲ ಅಮಾನತಿನಲ್ಲಿರಲು ಮತ್ತು ಇದೀಗ ಗುಲ್ಬರ್ಗ ಜಿಲ್ಲೆಯ ಚಿಂಚೋಳಿಯಲ್ಲಿರುವ ತಾಲೂಕು ಮಟ್ಟದ ಆಸ್ಪತ್ರೆಗೆ ವರ್ಗಾವಣೆಯಾಗಲು ಮುಖ್ಯ ಕಾರಣವೆನ್ನಲಾಗಿದೆ. ಈ ವರ್ಗಾವಣೆಯನ್ನು ಶಿಕ್ಷಾರ್ಹ ವರ್ಗಾವಣೆ ಎಂದೇ ವ್ಯಾಖ್ಯಾನಿಸಲಾಗುತ್ತಿದೆ.
ಡಾ.ಶರತ್ ಅವರನ್ನು ಸರಕಾರ ಚಿಂಚೋಳಿಗೆ ವರ್ಗಾವನೆಗೊಳಿಸಿದೆ ಎನ್ನುವ ವಿಷಯವನ್ನು ಮೊತ್ತ ಮೊದಲು ಬಹಿಂರಂಗಪಡಿಸಿದ್ದು, ಬಹುಕೋಟಿ ರಾಸಾಯನಿಕ ಹಗರಣದಲ್ಲಿ ಶಾಮೀಲಾಗಿರುವ ಜನರೇ ಎನ್ನಲಾಗುತ್ತಿದೆ. ಡಾ.ಶರತ್ ಅವರನ್ನು ಉಡುಪಿ ಜಿಲ್ಲಾಸ್ಪತ್ರೆಯ ರಕ್ತನಿಧಿಯಿಂದ, ರಕ್ತನಿಧಿ ವಿಭಾಗವೇ ಇಲ್ಲದ ಬಹುದೂರದ ಊರಾದ ಗುಲ್ಬರ್ಗ ಜಿಲ್ಲೆಯ ಚಿಂಚೋಳಿ ತಾಲೂಕು ಆಸ್ಪತ್ರೆಯ ಸಾಮಾನ್ಯ ವಿಭಾಗಕ್ಕೆ ರಾಜ್ಯ ಸರಕಾರ ಶಿಕ್ಷಾರ್ಹ ಎಂಬಂತೆ ವರ್ಗಾವಣೆಗೊಳಿಸಿದ್ದರಿಂದ ಬಹುಕೋಟಿ ರಾಸಾಯನಿಕ ಹಗರಣದಲ್ಲಿ ಶಾಮೀಲಾಗಿರುವ ವ್ಯಕ್ತಿಗಳು ಹರ್ಷದಿಂದ ವಿಷಯವನ್ನು ಬಹಿರಂಗಪಡಿಸಿದ್ದು ಸಹಜವೇ ಆಗಿತ್ತು.

ಡಾ.ಶರತ್ ಕುಮಾರ್ ರಾವ್ ಅವರು ತಮ್ಮ ಅಮಾನತು ಆದೇಶದ ವಿರುದ್ಧ ಕರ್ನಾಟಕ ಆಡಳಿತಾತ್ಮಕ ನ್ಯಾಯ ಮಂಡಳಿ (ಕೆಎಟಿ) ಗೆ ಮೊರೆ ಹೋದ ಹಿನ್ನೆಲೆಯಲ್ಲಿ ಅಮಾನತು ಆದೇಶವನ್ನು ಹಿಂತೆಗೆದುಕೊಳ್ಳಲು ಸಾಧ್ಯವಿಲ್ಲ, ಕಾನೂನಿನ ತೊಡಕಿದೆ ಎಂದು ಬೇರೆ ಬೇರೆ ಸಂದರ್ಭಗಳಲ್ಲಿ ಪದೇ ಪದೇ ಎಂಬಂತೆ ಆರೋಗ್ಯ ಇಲಾಖೆಯ ಹಾಲಿ ಪ್ರಧಾನ ಕಾರ್ಯದರ್ಶಿ ಎನ್.ಶಿವಶೈಲಂ, ಆರೋಗ್ಯ ಸಚಿವ ಯು.ಟಿ.ಖಾದರ್, ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ವಿನಯ ಕುಮಾರ್ ಸೊರಕೆ ಹಾಗೂ ಉಡುಪಿ ವಿಧಾನ ಸಭಾ ಕ್ಷೇತ್ರದ ಶಾಸಕ ಪ್ರಮೋದ್ ಮಧ್ವರಾಜ್ ಹೇಳಿಕೊಂಡು ಬಂದಿದ್ದರು. ಈ ವಾದವನ್ನು ಬಹಿರಂಗವಾಗಿಯೂ ಪ್ರಕಟಪಡಿಸಿದ್ದರು.

ದಕ್ಷತೆ ಮತ್ತು ಪ್ರಾಮಾಣಿಕತೆಗೆ ಹೆಸರಾದ ಡಾ.ಶರತ್ ಕುಮಾರ್ ರಾವ್ ಅವರು ಉಡುಪಿ ಜಿಲ್ಲಾಸ್ಪತ್ರೆ ರಕ್ತನಿಧಿ ವಿಭಾಗದ ವೈದ್ಯಾಧಿಕಾರಿಯಾದ ಬಳಿಕ ಉಡುಪಿ ರಕ್ತನಿಧಿಗೆ ರಾಜ್ಯ ಮಟ್ಟದಲ್ಲಿ ಹೆಸರು ಬರುವಂತೆ ಮಾಡಿದ್ದರು. ಕಳೆದ ವರ್ಷ ಅವರು ಅಮಾನತುಗೊಂಡ ಕಾರಣಕ್ಕೆ ಮತ್ತೆ ಉಡುಪಿ ಜಿಲ್ಲಾಸ್ಪತ್ರೆಯ ರಕ್ತನಿಧಿ ವಿಭಾಗ ಕಳೆಗುಂದಿತ್ತು. ಮಾತ್ರವಲ್ಲಿ ಅಸಂವಿಧಾನಿಕವಾಗಿ ಅವರನ್ನು ಅಮಾನತು ಮಾಡಲಾಗಿದೆಯಲ್ಲದೆ, ಅವರಿಗೆ ನಿಯಮಾವಳಿ ಪ್ರಕಾರ ನೀಡಬೇಕಾದ ಜೀವನಾಂಶವನ್ನೂ ಸರಿಯಾಗಿ ನೀಡದೆ ಮಾನವ ಹಕ್ಕುಗಳನ್ನು ಸರಕಾರ ಸಾರಾ ಸಗಟಾಗಿ ಉಲ್ಲಂಘಿಸುತ್ತಿದೆ. ಆದುದರಿಂದ ಅವರ ಅಮಾನತು ಆದೇಶವನ್ನು ಕೂಡಲೇ ಹಿಂಪಡೆದುಕೊಳ್ಳಬೇಕು ಎಂದು ಜಿಲ್ಲೆಯ ಖ್ಯಾತ ಮನೋ ವೈದ್ಯರಾದ ಡಾ.ಪಿ.ವಿ.ಭಂಡಾರಿಯವರ ನೇತೃತ್ವದಲ್ಲಿ ಸಾರ್ವಜನಿಕರು ಪ್ರತಿಭಟನೆ ನಡೆಸಿ ಆಗ್ರಹಪಡಿಸಿದಾಗ, ಡಾ.ಶರತ್ ಕೆಎಟಿ ಮೊರೆ ಹೋದ ಕಾರಣ ಅವರ ಅಮಾನತು ಹಿಂಪಡೆದಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ವಾದಿಸುತ್ತಿದ್ದ ಅಧಿಕಾರಿಗಳು, ಸಚಿವರು ಹಾಗೂ ಶಾಸಕರು, ಈಗ ಪ್ರಕರಣ ಕೆಎಟಿಯಲ್ಲಿರುವಾಗ ಹೇಗೆ ಅವರ ಅಮಾನತು ಆದೇಶವನ್ನು ಹಿಂಪಡೆದುಕೊಂಡರು ಎಂಬ ಪ್ರಶ್ನೆ ಸಹಜವಾಗಿಯೇ ಉಂಟಾಗಿದೆ.

ಡಾ.ಶರತ್ ಕುಮಾರ್ ರಾವ್ ಅವರು ತಾವು ಕೆಎಟಿಯಲ್ಲಿ ದಾಖಲಿಸಿದ ಪ್ರಕರಣವನ್ನು ಇನ್ನೂ ಹಿಂತೆಗೆದುಕೊಂಡಿಲ್ಲ. ಮೊನ್ನೆಯವರೆಗೂ ಇದೇ ಒಂದು ಕಾರಣದಿಂದ ಅವರ ಅಮಾನತು ಹಿಂಪಡೆದುಕೊಳ್ಳಲಾಗುವುದಿಲ್ಲ ಎಂದು ಹೇಳುತ್ತಿದ್ದ ಅಧಿಕಾರಿಗಳೇ, ಇದೀಗ ಅಮಾನತು ಹಿಂತೆಗೆದುಕೊಳ್ಳುವ ಆದೇಶ ಹೊರಡಿಸಿದ್ದಾರೆ.

ಇದನ್ನೆಲ್ಲ ಗಮನಿಸಿದಾಗ ಒಂದೋ ಆರೋಗ್ಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ಶಿವಶೈಲಂ, ಸಚಿವರಾದ ಖಾದರ್, ಸೊರಕೆ ಹಾಗೂ ಶಾಸಕ ಪ್ರಮೋದ್ ಮಧ್ವರಾಜ್ ಇವರೆಲ್ಲರೂ ಜೊತೆಯಾಗಿ ಅತ್ಯಂತ ವ್ಯವಸ್ಥಿತವಾಗಿ ಮತ್ತು ಉದ್ಧೇಶಪೂರ್ವಕವಾಗಿ ಸಾರ್ವಜನಿಕರಿಗೆ ತಪ್ಪು ಮಾಹಿತಿ ನೀಡಿದರು ಅಥವಾ ಅಧಿಕಾರಿಗಳು ಜನಪ್ರತಿನಿಧಿಗಳಿಗೆ ತಪ್ಪು ಮಾಹಿತಿ ನೀಡಿದರು ಎನ್ನುವುದು, ಈ ಎರಡರಲ್ಲಿ ಯಾವುದಾದರು ಒಂದಂತೂ ಸ್ಪಷ್ಟ ಎಂಬುದು ಸ್ಪಷ್ಟವಾಗುತ್ತದೆ.

ಎಲ್ಲರೂ ಸೇರಿ ಮತದಾರರಿಗೆ ಹೀಗೊಂದು ವಂಚನೆ ಮತ್ತು ಮೋಸ ಮಾಡಿದರು ಇಲ್ಲವೇ ಅಧಿಕಾರಿಗಳು ಜನಪ್ರತಿನಿಧಿಗಳನ್ನು ಮೂರ್ಖರನ್ನಾಗಿಸಿದರು ಮತ್ತು ಸಂಪೂರ್ಣವಾಗಿ ಕತ್ತಲೆಯಲ್ಲಿರಿಸಿದ್ದರು ಎನ್ನುವುದು ಖಚಿತವಾಗುತ್ತದೆ. ಇವೆರಡರಲ್ಲಿ ಯಾವುದೇ ಒಂದು ಸತ್ಯವಾದರೂ ಈ ರೀತಿಯ ಕುಟಿಲ, ಕುತಂತ್ರ, ಹೊಲಸು, ಅಸಹ್ಯ ರಾಜಕಾರಣ ಮತದಾರರಿಗೆ ಮಾಡಿದ ಮಹಾದ್ರೋಹವಾಗಿದ್ದು, ಇದಕ್ಕಾಗಿ ಇವರುಗಳ ವಿರುದ್ಧ ಮುಖ್ಯಮಂತ್ರಿಗಳು ಹಾಗೂ ರಾಜ್ಯಪಾಲರು ಸೂಕ್ತ ಕ್ರಮಗಳನ್ನು ಜರುಗಿಸಬೇಕು ಎಂಬುದು ಹೋರಾಟಗಾರರ ಒತ್ತಾಯವಾಗಿದೆ.

ಡಾ.ಶರತ್ ಕುಮಾರ್ ರಾವ್ ಒಬ್ಬರು ಪೆಥೋಲಜಿಸ್ಟ್ ಆಗಿದ್ದು, ಅವರನ್ನು ರಕ್ತನಿಧಿ ವಿಭಾಗವಿಲ್ಲದ ಗುಲ್ಬರ್ಗ ಜಿಲ್ಲೆಯ ಚಿಂಚೋಳಿ ತಾಲೂಕು ಆಸ್ಪತ್ರೆಗೆ ವರ್ಗಾವಣೆ ಮಾಡಿರುವುದು ಷಡ್ಯಂತ್ರದ ಒಂದು ಭಾಗವೆನ್ನಲಾಗಿದೆ. ಉಡುಪಿ ಜಿಲ್ಲಸ್ಪತ್ರೆಯ ರಕ್ತನಿಧಿ ವಿಭಾಗವನ್ನು ನಾಶಗೊಳಿಸಿ ಖಾಸಗಿಯವರ ರಕ್ತನಿಧಿ ವಿಭಾಗವನ್ನು ಬಲಿಷ್ಟಗೊಳಿಸುವ ಹುನ್ನಾರದಲ್ಲಿ ಸಕ್ರಿಯವಾಗಿ ಶಾಮೀಲಾಗಿರುವ ಜನಪ್ರತನಿಧಿಗಳು ಹಾಗೂ ಆರೋಗ್ಯ ಇಲಾಖೆ ಜಂಟಿಯಾಗಿ ರೂಪಿಸಿದ ಕಾರ್ಯತಂತ್ರದ ಫಲವಾಗಿ ಡಾ.ಶರತ್ ಕುಮಾರ್ ರಾವ್ ಅವರನ್ನು ಚಿಂಚೋಳಿಗೆ ವರ್ಗಾವಣೆಗೊಳಿಸಲಾಗಿದೆ ಎಂಬುದು ದೃಢಪಟ್ಟಿದೆ.

ಬಹುಕೋಟಿ ರಾಸಾಯನಿಕ ಹಗರಣದ ಬಗ್ಗೆ ಡಾ.ಕೆ.ಎಚ್.ನರಸಿಂಹಮೂರ್ತಿ ಅವರು ತನಿಖೆ ನಡೆಸಿ ಸರಕಾರಕ್ಕೆ ಸಲ್ಲಿಸಿದ ತನಿಖಾ ವರದಿಯ ಆಧಾರದಲ್ಲಿ ತಪ್ಪಿತಸ್ಥರ ವಿರುದ್ಧ ಯಾವುದೇ ಕ್ರಮಗಳನ್ನೂ ತೆಗೆದುಕೊಳ್ಳದೆ ಅವರನ್ನು ರಕ್ಷಿಸುತ್ತಿರುವ ರಾಜ್ಯ ಸರಕಾರ, ಹಗರಣದ ಬಗ್ಗೆ ಸರಕಾರದ ಗಮನಸೆಳೆದರು ಎನ್ನುವ ಏಕೈಕ ಕಾರಣಕ್ಕೆ ಡಾ.ಶರತ್ ಅವರನ್ನು ಈ ರೀತಿಯಾಗಿ ನಿರಂತವಾಗಿ ವಿಧವಿಧವಾಗಿ ಹಿಂಸಿಸಿ, ಶಿಕ್ಷಿಸುತ್ತಿರುವುದರ ಬಗ್ಗೆ ನಾಗರಿಕ ಸಮೂದಾಯ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.