Posts Tagged ‘pramod madhwaraj mla udupi’

http://www.udupibits.in news
ಉಡುಪಿ: ಒಂದು ವರ್ಷ ಎರಡು ತಿಂಗಳ ಬಳಿಕ ಉಡುಪಿ ಜಿಲ್ಲಾ ಸರಕಾರಿ ಆಸ್ಪತ್ರೆಯ ರಕ್ತನಿಧಿ ವಿಭಾಗದ ವೈದ್ಯಾಧಿಕಾರಿ ಡಾ.ಶರತ್ ಕುಮಾರ್ ರಾವ್ ಅವರ ಅಮಾನತು ಹಿಂತೆಗೆದುಕೊಂಡ ರಾಜ್ಯ ಸರಕಾರ, ಅವರನ್ನು ದೂರದ ಉತ್ತರ ಕರ್ನಾಟಕ ಪ್ರದೇಶದ ರಕ್ತನಿಧಿ ವಿಭಾಗವೇ ಇಲ್ಲದ ಗುಲ್ಬರ್ಗ ಜಿಲ್ಲೆಯ ಚಿಂಚೋಳಿ ತಾಲೂಕು ಸರಕಾರಿ ಆಸ್ಪತ್ರೆಗೆ ಶಿಕ್ಷಾರ್ಹ ವರ್ಗಾವಣೆ ಮಾಡಿರುವ ಕ್ರಮವನ್ನು ಖಂಡಿಸಿ ಮತ್ತು ಈ ವರ್ಗಾವಣೆಯನ್ನು ಹಿಂಪಡೆದುಕೊಂಡು ಮತ್ತೆ ಉಡುಪಿ ಜಿಲ್ಲಾಸ್ಪತ್ರೆಗೆ ಮರು ನೇಮಕ ಮಾಡುವಂತೆ ಆಗ್ರಹಿಸಿ ನವೆಂಬರ್ 15ರಂದು ಬೆಳಗ್ಗೆ ಗಂಟೆ 10ರಿಂದ ಸಂಜೆ ಗಂಟೆ 5ರ ವರೆಗೆ ಉಡುಪಿ ತಾಲೂಕು ಪಂಚಾಯತ್ ಕಾರ್ಯಾಲಯದ ಆವರಣದಲ್ಲಿರುವ ಉಡುಪಿ ವಿಧಾನಸಭಾ ಕ್ಷೇತ್ರದ ಶಾಸಕರಾದ ಪ್ರಮೋದ್ ಮಧ್ವರಾಜ್ ಅವರ ಕಚೇರಿ ಮುಂದೆ ಒಂದು ದಿನದ ಧರಣಿ ಸತ್ಯಾಗ್ರಹ ನಡೆಸಲು ಉಡುಪಿ ನಾಗರಿಕರ ವೇದಿಕೆ ನಿರ್ಧರಿಸಿದೆ.

ವೇದಿಕೆಯ ಅಧ್ಯಕ್ಷರಾದ ಖ್ಯಾತ ಮನೋವೈದ್ಯ ಡಾ.ಪಿ.ವಿ.ಭಂಡಾರಿಯವರ ಅಧ್ಯಕ್ಷತೆಯಲ್ಲಿ ಇತ್ತೀಚೆಗೆ ಉಡುಪಿಯಲ್ಲಿ ನಡೆದ ವೇದಿಕೆ ಪ್ರಮುಖರ ಸಭೆಯಲ್ಲಿ ಈ ಬಗ್ಗೆ ನಿರ್ಣಯ ತೆಗೆದುಕೊಳ್ಳಲಾಯಿತು.

ಉಡುಪಿ ಜಿಲ್ಲಾಸ್ಪತ್ರೆ, ಜಿಲ್ಲಾ ಕೇಂದ್ರವಾಗಿರುವ ಉಡುಪಿಯಲ್ಲಿ ಇರುವುದರಿಂದ; ಈ ಪ್ರಕ್ರಿಯೆಯಲ್ಲಿ ಜಿಲ್ಲಾ ಕೇಂದ್ರದ ಶಾಸಕರಾದ ಪ್ರಮೋದ್ ಮಧ್ವರಾಜ್ ಅವರ ಪಾತ್ರ ಪ್ರಮುಖವಾದುದು ಎಂಬ ಅಭಿಪ್ರಾಯದ ಹಿನ್ನೆಲೆಯಲ್ಲಿ ಹೋರಾಟದ ಮೊದಲ ಹಂತವಾಗಿ ನ.15ರಂದು ಶನಿವಾರ ಒಂದು ದಿನದ ಧರಣಿ ಸತ್ಯಾಗ್ರಹ ನಡೆಸಲು ಸಭೆಯಲ್ಲಿ ಒಕ್ಕೊರಲ ತೀರ್ಮಾನ ತೆಗೆದುಕೊಳ್ಳಲಾಯಿತು.

ಡಾ.ಶರತ್ ಕುಮಾರ್ ರಾವ್ ಜಿಲ್ಲಾಸ್ಪತ್ರೆಯಲ್ಲಿ ಸೇವೆ ಸಲ್ಲಿಸುತ್ತಿರುವ ಅವಧಿಯಲ್ಲಿ ವಾರ್ಷಿಕ 9 ಸಾವಿರಕ್ಕೂ ಅಧಿಕ ಯುನಿಟ್ ರಕ್ತ ಸಂಗ್ರಹವಾಗುತ್ತಿದ್ದರೆ, ಇದೀಗ ಈ ಸಂಗ್ರಹ 5 ಸಾವಿರಕ್ಕಿಂತಲೂ ಕಡಿಮೆಯಾಗಿದೆ ಎಂಬ ಅಂಶ ಸಭೆಯಲ್ಲಿ ಚರ್ಚೆಗೆ ಬಂತು. ಉಡುಪಿ ನಾಗರಿಕರ ವೇದಿಕೆ ನಡೆಸುತ್ತಿರುವ ಹೋರಾಟ ಕೇವಲ ಡಾ.ಶರತ್ ಕುಮಾರ್ ಅವರ ಪರವಾದುದಷ್ಟೇ ಅಲ್ಲದೆ, ಇದು ಉಡುಪಿ ಜಿಲ್ಲಾ ಸರಕಾರಿ ಆಸ್ಪತ್ರೆಯಲ್ಲಿರುವ ರಕ್ತನಿಧಿ ವಿಭಾಗವನ್ನು ಉಳಿಸುವ ಒಂದು ಹೋರಾಟವೂ ಆಗಿದೆ ಎನ್ನುವ ವಿಷಯವನ್ನೂ ಸಭೆ ಅಂಗೀಕರಿಸಿತು.

ಡಾ.ಶರತ್ ಕುಮಾರ್ ರಾವ್ ಅವರು ಓರ್ವ ಪೆಥೋಲಜಿಸ್ಟ್ ಆಗಿದ್ದು, ಅವರನ್ನು ರಕ್ತನಿಧಿ ವಿಭಾಗವೇ ಇಲ್ಲದ ದೂರದ ಗುಲ್ಬರ್ಗ ಜಿಲ್ಲೆಯ ಚಿಂಚೋಳಿ ತಾಲೂಕು ಆಸ್ಪತ್ರೆಗೆ ವರ್ಗಾವಣೆ ಮಾಡಿರುವುದು ಧ್ವೇಷದಿಂದಲ್ಲದೆ ಬೇರೇನೂ ಅಲ್ಲ ಎನ್ನುವ ಅಭಿಪ್ರಾಯವೂ ಸಭೆಯಲ್ಲಿ ವ್ಯಕ್ತಗೊಂಡಿತು.

ನವೆಂಬರ್ 15ರ ಹೋರಾಟವನ್ನು ಮುಂದಿನ ದಿನಗಳಲ್ಲಿ ಉಡುಪಿ ನಗರಸಭೆಯ 35 ವಾರ್ಡ್ ಗಳಲ್ಲಿ ಮತ್ತು ಉಡುಪಿ ತಾಲೂಕಿನಾದ್ಯಂತದ ಎಲ್ಲಾ ಹೋಬಳಿ ಕೇಂದ್ರಗಳಿಗೆ ವಿಸ್ತರಿಸಲು ಸಭೆಯಲ್ಲಿ ನಿರ್ಣಯಿಸಲಾಯಿತು.

ನ.15ರ ಧರಣಿ ಸತ್ಯಾಗ್ರಹದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಡಾ.ಪಿ.ವಿ.ಭಂಡಾರಿ ನಾಗರಿಕರಲ್ಲಿ ವಿನಂತಿಸಿಕೊಂಡಿದ್ದಾರೆ.

ವರದಿ : ಶ್ರೀರಾಮ ದಿವಾಣ.
ಉಡುಪಿ: ಉಡುಪಿ ಜಿಲ್ಲಾ ಅಲ್ಪಸಂಖ್ಯಾತರ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಶೇಷಪ್ಪ ಹಾಗೂ ಉಡುಪಿ ತಾಲೂಕು ವಿಸ್ತರಣಾಧಿಕಾರಿ ಗಾಣಿಗ ಮೊದಲಾದವರು ಹಾಸ್ಟೆಲ್ ಹೆಸರಿನಲ್ಲಿ ಭಾರೀ ಬಾಡಿಗೆ ದಂಧೆ ನಡೆಸುತ್ತಿದ್ದು, ಅಧಿಕಾರಿಗಳ ಈ ಬಾಡಿಗೆ ದಂಧೆಯಿಂದಾಗಿ ವಿದ್ಯಾರ್ಥಿ – ವಿದ್ಯಾರ್ಥಿನಿಯರು ಮೂಲಭೂತ ಸೌಲಭ್ಯಗಳ ಕೊರತೆಯಿಂದ ಬಳಲುವಂಥ ಶೋಚನೀಯ ಪರಿಸ್ಥಿತಿ ಸೃಷ್ಟಿಯಾಗಿದೆ.

ಅಲ್ಪಸಂಖ್ಯಾತರ ಮೆಟ್ರಿಕ್ ನಂತರದ ವಿದ್ಯಾರ್ಥಿನಿ ನಿಲಯ, ಹಿಂದುಳಿದ ವರ್ಗಗಳ ಮೆಟ್ರಿಕ್ ನಂತರದ ವಿದ್ಯಾರ್ಥಿನಿ ನಿಲಯ, ಶ್ರೀಮತಿ ಇಂದಿರಾ ಗಾಂಧಿ ಹಿಂದುಳಿದ ವರ್ಗಗಳ ಮೆಟ್ರಿಕ್ ನಂತರದ ಮಹಿಳಾ ನರ್ಸಿಂಗ್ ವಿದ್ಯಾರ್ಥಿ ನಿಲಯ ಸಹಿತ ಒಟ್ಟು 13 ವಿದ್ಯಾರ್ಥಿ ನಿಲಯಗಳಿಗೆ ಮತ್ತು 3 ಮೊರಾರ್ಜಿ ದೇಸಾಯಿ ವಸತಿ ಶಾಲೆಗಳಿಗೆ ಉಡುಪಿ ಜಿಲ್ಲೆಯಲ್ಲಿ ಸ್ವಂತ ಕಟ್ಟಡವಿಲ್ಲದೆ ಖಾಸಗಿ ಕಟ್ಟಡದಲ್ಲಿ ಕಾರ್ಯಾಚರಿಸುತ್ತಿವೆ.

25 ವಿದ್ಯಾರ್ಥಿ ನಿಲಯಗಳು ಮತ್ತು 2 ವಸತಿ ಶಾಲೆಗಳು ಮಾತ್ರ ಸ್ವಂತ ಕಟ್ಟಡದಲ್ಲಿದೆ. ಖಾಸಗಿ ಕಟ್ಟಡಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಉಳಿದ ಅಷ್ಟೂ ವಿದ್ಯಾರ್ಥಿ ನಿಲಯಗಳು ಮತ್ತು ವಸತಿ ಶಾಲೆಗಳು ಒಂದಲ್ಲ ಒಂದು ಗಂಭೀರ ಕೊರತೆಯಿಂದ ನಲುಗುತ್ತಿದೆ. ವಿದ್ಯಾರ್ಥಿ ನಿಲಯಗಳ ಪೈಕಿ 2 ವಿದ್ಯಾರ್ಥಿ ನಿಲಯಗಳು ಖಾಸಗಿ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿವೆಯಾದರೂ, ಇವುಗಳಿಗೆ ಇಲಾಖೆ ಬಾಡಿಗೆ ಪಾವತಿಸುತ್ತಿಲ್ಲ. ಉಚಿತವಾಗಿ ಲಭ್ಯವಾಗಿರುವುದೇ ಇದಕ್ಕೆ ಕಾರಣವೆನ್ನಲಾಗುತ್ತಿದೆ.

ವಿದ್ಯಾರ್ಥಿ ನಿಲಯಗಳು ಮತ್ತು ವಸತಿ ಶಾಲೆಗಳು ಬಾಡಿಗೆ ಕಟ್ಟಡಗಳಲ್ಲಿ ಕಾರ್ಯನಿರ್ವಹಿಸುತ್ತಿರುವುದು ಇಲಾಖಾಧಿಕಾರಿಗಳಿಗೆ ಬಹುದೊಡ್ಡ ವರದಾನವಾಗಿ ಪರಿಣಮಿಸಿದೆ. ಒಂದೊಂದು ಹಾಸ್ಟೆಲ್ ಕಟ್ಟಡಕ್ಕೂ 25ರಿಂದ 50 ಸಾವಿರ ರು. ವರೆಗೂ ಇಲಾಖೆ ಬಾಡಿಗೆ ನಿಗದಿ ಮಾಡಿದೆ. ದೊಡ್ಡ ಮೊತ್ತದ ಬಾಡಿಗೆ ದರವನ್ನು ಕೇವಲ ಕಡತಗಳಿಗಾಗಿ ಇಲಾಖಾಧಿಕಾರಿಗಳು ನಿಗದಿಪಡಿಸುತ್ತಾರೆ. ಬಾಡಿಗೆ ದರ ನಿಗದಿಪಡಿಸಿದ ಬಳಿಕ ಬಾಡಿಗೆ ದರವನ್ನು ಬಾಡಿಗೆ ಕಟ್ಟಡದ ಮಾಲೀಕರಿಗೆ ಪಾವತಿಸದೆ ಕಡಿಮೆ ಮೊತ್ತ ಪಾವತಿಸಿ, ಉಳಿದ ಮೊತ್ತವನ್ನು ತಮ್ಮ ಸ್ವಂತಕ್ಕಾಗಿ ತಮ್ಮಲ್ಲೇ ಉಳಿಸಿಕೊಳ್ಳುತ್ತಾರೆ.

ಅಂದರೆ, ಇದೊಂದು ಕಮಿಷನ್ ದಂಧೆಯಾಗಿ ಹೋಗಿದೆ ಎನ್ನಲಾಗುತ್ತಿದೆ. ಇಲ್ಲಿ ಬಾಡಿಗೆ ಕಟ್ಟಡದ ಮಾಲೀಕರೂ ಸಹ ಇಲಾಖಾಧಿಕಾರಿಗಳ ಜೊತೆ ಮೊದಲೇ ಹೊಂದಾಣಿಕೆ ಮಾಡಿಕೊಂಡಿರುತ್ತಾರೆ. ಅವರಿಗೂ ಇದೊಂದು ಸಹಜವಾದ ವ್ಯವಹಾರವೇ ಆಗಿರುವುದೇ
ಇಲಾಖಾಧಿಕಾರಿಗಳ ಇಂಥ ಬಾಡಿಗೆ ದಂಧೆ ಯಾವುದೇ ಅಡೆತಡೆಯೂ ಇಲ್ಲದೆ ಮುಂದುವರಿದುಕೊಂಡು ಬರಲು ಕಾರಣವೆನ್ನಲಾಗಿದೆ.

ಇಲ್ಲಿ ಇನ್ನೊಂದು ಒಳ ವ್ಯವಹಾರ ಮತ್ತು ರಾಜಕೀಯವೂ ಇದೆ. ಅದು ಕೊಡು ಕೊಳುವಿಕೆ. ಇಲಾಖಾಧಿಕಾರಿಗಳು ಇತರ ಇಲಾಖೆಗಳ ಅಧಿಕಾರಿಗೊಂದಿಗೆ ಮತ್ತು ರಾಜಕಾರಣಿಗಳೊಂದಿಗೆ ನಡೆಸುವ ವ್ಯವಹಾರವಿದು. ಇದರಿಂದ ಇಬ್ಬರಿಗೂ ಪ್ರತ್ಯಕ್ಷ ಮತ್ತು ಪರೋಕ್ಷವಾದ ಕೆಲವೊಂದು ಲಾಭಗಳಿವೆ.

ಉದಾಹರಣೆಗೆ ಹೇಳುವುದಾದರೆ, ಅಲ್ಪಸಂಖ್ಯಾತರ ಮೆಟ್ರಿಕ್ ನಂತರದ ವಿದ್ಯಾರ್ಥಿನಿ ನಿಲಯ ಮತ್ತು ಹಿಂದುಳಿದ ವರ್ಗಗಳ ಮೆಟ್ರಿಕ್ ನಂತರದ ಮಹಿಳಾ ನರ್ಸಿಂಗ್ ವಿದ್ಯಾರ್ಥಿ ನಿಲಯಗಳಿರುವುದು ಉಡುಪಿ ನಗರದ ಬಲಾಯಿಪಾದೆಯಲ್ಲಿರುವ ಬಾಡಿಗೆ ಕಟ್ಟಡದಲ್ಲಿ. ಈ ಬಾಡಿಗೆ ಕಟ್ಟಡ ಸರಕಾರಿ ಅಧಿಕಾರಿಯೊಬ್ಬರಿಗೆ ಸೇರಿದ್ದು.

ಇತ್ತೀಚೆಗಿನವರೆಗೂ ಹಿಂದುಳಿದ ವರ್ಗಗಳ ಮೆಟ್ರಿಕ್ ನಂತರದ ವಿದ್ಯಾರ್ಥಿನಿ ನಿಲಯ ಇದ್ದುದು ಉಡುಪಿ ವಿದಾನಸಭಾ ಕ್ಷೇತ್ರ ವ್ಯಾಪ್ತಿಯ ತೊಟ್ಟಂ ಎಂಬಲ್ಲಿನ ಬಾಡಿಗೆ ಕಟ್ಟಡದಲ್ಲಿ. ಈ ಬಾಡಿಗೆ ಕಟ್ಟಡವನ್ನು ಉದ್ಘಾಟಿಸಿದವರು ಉಡುಪಿ ವಿಧಾನಸಭಾ ಕ್ಷೇತ್ರದ ಶಾಸಕರಾದ ಪ್ರಮೋದ್ ಮಧ್ವರಾಜ್ ಅವರು. ಅಂದರೆ ಈ ಕಟ್ಟಡದ ಮಾಲೀಕರು ಪ್ರಮೋದ್ ಮಧ್ವರಾಜ್ ಅವರಿಗೆ ಬೇಕಾದವರು.

ಬಾಡಿಗೆ ಕಟ್ಟದ ಮಾಲೀಕರಿಗೂ, ರಾಜಕಾರಣಿಗಳಿಗೂ, ಸರಕಾರಿ ಅಧಿಕಾರಿಗಳಿಗೂ ನಡುವೆ ಕೊಡು ಕೊಳ್ಳುವಿಕೆ ಇರುವುದರ ಪರಿಣಾಮವೇ, ಯಾವುದೇ ಮೂಲಭೂತ ಸೌಲಭ್ಯಗಳಿಲ್ಲದಿದ್ದರೂ ಹಾಸ್ಟೆಲ್ಗಳನ್ನು ಇಂಥ ನಿರ್ಧಿಷ್ಟ ಕಟ್ಟಡಗಳಲ್ಲಿ ಕಾರ್ಯನಿರ್ವಹಿಸುವಂತೆ ಮಾಡಲಾಗಿರುತ್ತದೆ. ಈ ಒಳ ಒಪ್ಪಂದದಿಂದಾಗಿ ಇವುಗಳ ಫಲಾನುಭವಿಗಳಿಗೆ ಪರಸ್ಪರ ಲಾಭ ಮಾಡಿಕೊಳ್ಳುತ್ತಾರೆ.

3 ವರ್ಷದಿಂದ ಶೇಷಪ್ಪರೇ ಪ್ರಭಾರ..!

ಜಿಲ್ಲಾ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿಯಾದ ಶೇಷಪ್ಪನವರೇ, ಕಳೆದ ಮೂರು ವರ್ಷಗಳಿಂದ ಜಿಲ್ಲಾ ಅಲ್ಪಸಂಖ್ಯಾತ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಪ್ರಭಾರ ಅಧಿಕಾರಿಯಾಗಿದ್ದಾರೆ. ಶೇಷಪ್ಪನವರು, ಉಡುಪಿ ಜಿಲ್ಲಾ ಉಸ್ತುವಾರಿ ಸಚಿವರಾದ ವಿನಯ ಕುಮಾರ್ ಸೊರಕೆಯವರ ಜಾತಿಗೆ ಸೇರಿದವರಾದ ಕಾರಣ ಹಾಗೂ ಸೊರಕೆಯವರ ಖಾಸಗಿ ಆಪ್ತ ಸಹಾಯಕನಂತೆ ನಡೆದುಕೊಳ್ಳುತ್ತಿರುವುದರಿಂದಲೇ ಶೇಷಪ್ಪ ಅವರು ಎರಡೂ ಇಲಾಖೆಗಳ ಅಧಿಕಾರಿಯಾಗು ಮುಮದುವರಿಯಲು ಕಾರಣವೆನ್ನಲಾಗಿದೆ.

ಎರಡು ಇಲಾಖೆಗಳೂ ಸಾಮಾನ್ಯ ಇಲಾಖೆಗಳೇನೂ ಅಲ್ಲ. ಅನೇಕ ಬಹುದೊಡ್ಡ ಜವಾಬ್ದಾರಿಗಳಿರುವ ಎರಡೂ ಇಲಾಖೆಗಳನ್ನು ಒಬ್ಬರೇ ವ್ಯಕ್ತಿ ನಿರ್ವಹಿಸುವುದು ಕಷ್ಟಸಾಧ್ಯವಾಗಿದೆಯಾದರೂ, ಕಳೆದ ಮೂರು ವರ್ಷಗಳಿಂದಲೂ ಒಬ್ಬರೇ ವ್ಯಕ್ತಿಯನ್ನು ಎರಡೂ ಇಲಾಖೆಗಳ ಅಧಿಕಾರಿಯನ್ನಾಗಿ ಮುಂದುವರಿಸಿರುವುದು ಜಾತಿ, ಹಣ ಮತ್ತು ರಾಜಕೀಯ ಲಾಬಿಯಲ್ಲದೇ ಬೇರೇನೂ ಅಲ್ಲ.

ಇವರೆಲ್ಲ ಏನೂ ಬೇಕಾದರೂ ಮಾಡಿಕೊಳ್ಳಲಿ, ಆದರೆ ಇವರ ಸ್ವಹಿತಾಸಕ್ತಿಯ ಕಾರ್ಯಕ್ಕಾಗಿ ವಿದ್ಯಾರ್ಥಿ – ವಿದ್ಯಾರ್ಥಿನಿಯರ ದಿನಚರಿಯನ್ನು ಯಾಕಾಗಿ ಇವರು ನರಕವನ್ನಾಗಿ ಮಾಡಬೇಕು ?

ವರದಿ : ಶ್ರೀರಾಮ ದಿವಾಣ.
ಉಡುಪಿ: ಉಡುಪಿ ಜಿಲ್ಲಾ ಅಲ್ಪಸಂಖ್ಯಾತರ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಶೇಷಪ್ಪ ಹಾಗೂ ಉಡುಪಿ ತಾಲೂಕು ವಿಸ್ತರಣಾಧಿಕಾರಿ ಗಾಣಿಗ ಮೊದಲಾದವರು ಹಾಸ್ಟೆಲ್ ಹೆಸರಿನಲ್ಲಿ ಭಾರೀ ಬಾಡಿಗೆ ದಂಧೆ ನಡೆಸುತ್ತಿದ್ದು, ಅಧಿಕಾರಿಗಳ ಈ ಬಾಡಿಗೆ ದಂಧೆಯಿಂದಾಗಿ ವಿದ್ಯಾರ್ಥಿ – ವಿದ್ಯಾರ್ಥಿನಿಯರು ಮೂಲಭೂತ ಸೌಲಭ್ಯಗಳ ಕೊರತೆಯಿಂದ ಬಳಲುವಂಥ ಶೋಚನೀಯ ಪರಿಸ್ಥಿತಿ ಸೃಷ್ಟಿಯಾಗಿದೆ.

ಅಲ್ಪಸಂಖ್ಯಾತರ ಮೆಟ್ರಿಕ್ ನಂತರದ ವಿದ್ಯಾರ್ಥಿನಿ ನಿಲಯ, ಹಿಂದುಳಿದ ವರ್ಗಗಳ ಮೆಟ್ರಿಕ್ ನಂತರದ ವಿದ್ಯಾರ್ಥಿನಿ ನಿಲಯ, ಶ್ರೀಮತಿ ಇಂದಿರಾ ಗಾಂಧಿ ಹಿಂದುಳಿದ ವರ್ಗಗಳ ಮೆಟ್ರಿಕ್ ನಂತರದ ಮಹಿಳಾ ನರ್ಸಿಂಗ್ ವಿದ್ಯಾರ್ಥಿ ನಿಲಯ ಸಹಿತ ಒಟ್ಟು 13 ವಿದ್ಯಾರ್ಥಿ ನಿಲಯಗಳಿಗೆ ಮತ್ತು 3 ಮೊರಾರ್ಜಿ ದೇಸಾಯಿ ವಸತಿ ಶಾಲೆಗಳಿಗೆ ಉಡುಪಿ ಜಿಲ್ಲೆಯಲ್ಲಿ ಸ್ವಂತ ಕಟ್ಟಡವಿಲ್ಲದೆ ಖಾಸಗಿ ಕಟ್ಟಡದಲ್ಲಿ ಕಾರ್ಯಾಚರಿಸುತ್ತಿವೆ.

25 ವಿದ್ಯಾರ್ಥಿ ನಿಲಯಗಳು ಮತ್ತು 2 ವಸತಿ ಶಾಲೆಗಳು ಮಾತ್ರ ಸ್ವಂತ ಕಟ್ಟಡದಲ್ಲಿದೆ. ಖಾಸಗಿ ಕಟ್ಟಡಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಉಳಿದ ಅಷ್ಟೂ ವಿದ್ಯಾರ್ಥಿ ನಿಲಯಗಳು ಮತ್ತು ವಸತಿ ಶಾಲೆಗಳು ಒಂದಲ್ಲ ಒಂದು ಗಂಭೀರ ಕೊರತೆಯಿಂದ ನಲುಗುತ್ತಿದೆ. ವಿದ್ಯಾರ್ಥಿ ನಿಲಯಗಳ ಪೈಕಿ 2 ವಿದ್ಯಾರ್ಥಿ ನಿಲಯಗಳು ಖಾಸಗಿ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿವೆಯಾದರೂ, ಇವುಗಳಿಗೆ ಇಲಾಖೆ ಬಾಡಿಗೆ ಪಾವತಿಸುತ್ತಿಲ್ಲ. ಉಚಿತವಾಗಿ ಲಭ್ಯವಾಗಿರುವುದೇ ಇದಕ್ಕೆ ಕಾರಣವೆನ್ನಲಾಗುತ್ತಿದೆ.

ವಿದ್ಯಾರ್ಥಿ ನಿಲಯಗಳು ಮತ್ತು ವಸತಿ ಶಾಲೆಗಳು ಬಾಡಿಗೆ ಕಟ್ಟಡಗಳಲ್ಲಿ ಕಾರ್ಯನಿರ್ವಹಿಸುತ್ತಿರುವುದು ಇಲಾಖಾಧಿಕಾರಿಗಳಿಗೆ ಬಹುದೊಡ್ಡ ವರದಾನವಾಗಿ ಪರಿಣಮಿಸಿದೆ. ಒಂದೊಂದು ಹಾಸ್ಟೆಲ್ ಕಟ್ಟಡಕ್ಕೂ 25ರಿಂದ 50 ಸಾವಿರ ರು. ವರೆಗೂ ಇಲಾಖೆ ಬಾಡಿಗೆ ನಿಗದಿ ಮಾಡಿದೆ. ದೊಡ್ಡ ಮೊತ್ತದ ಬಾಡಿಗೆ ದರವನ್ನು ಕೇವಲ ಕಡತಗಳಿಗಾಗಿ ಇಲಾಖಾಧಿಕಾರಿಗಳು ನಿಗದಿಪಡಿಸುತ್ತಾರೆ. ಬಾಡಿಗೆ ದರ ನಿಗದಿಪಡಿಸಿದ ಬಳಿಕ ಬಾಡಿಗೆ ದರವನ್ನು ಬಾಡಿಗೆ ಕಟ್ಟಡದ ಮಾಲೀಕರಿಗೆ ಪಾವತಿಸದೆ ಕಡಿಮೆ ಮೊತ್ತ ಪಾವತಿಸಿ, ಉಳಿದ ಮೊತ್ತವನ್ನು ತಮ್ಮ ಸ್ವಂತಕ್ಕಾಗಿ ತಮ್ಮಲ್ಲೇ ಉಳಿಸಿಕೊಳ್ಳುತ್ತಾರೆ.

ಅಂದರೆ, ಇದೊಂದು ಕಮಿಷನ್ ದಂಧೆಯಾಗಿ ಹೋಗಿದೆ ಎನ್ನಲಾಗುತ್ತಿದೆ. ಇಲ್ಲಿ ಬಾಡಿಗೆ ಕಟ್ಟಡದ ಮಾಲೀಕರೂ ಸಹ ಇಲಾಖಾಧಿಕಾರಿಗಳ ಜೊತೆ ಮೊದಲೇ ಹೊಂದಾಣಿಕೆ ಮಾಡಿಕೊಂಡಿರುತ್ತಾರೆ. ಅವರಿಗೂ ಇದೊಂದು ಸಹಜವಾದ ವ್ಯವಹಾರವೇ ಆಗಿರುವುದೇ ಇಲಾಖಾಧಿಕಾರಿಗಳ ಇಂಥ ಬಾಡಿಗೆ ದಂಧೆ ಯಾವುದೇ ಅಡೆತಡೆಯೂ ಇಲ್ಲದೆ ಮುಂದುವರಿದುಕೊಂಡು ಬರಲು ಕಾರಣವೆನ್ನಲಾಗಿದೆ.

ಇಲ್ಲಿ ಇನ್ನೊಂದು ಒಳ ವ್ಯವಹಾರ ಮತ್ತು ರಾಜಕೀಯವೂ ಇದೆ. ಅದು ಕೊಡು ಕೊಳುವಿಕೆ. ಇಲಾಖಾಧಿಕಾರಿಗಳು ಇತರ ಇಲಾಖೆಗಳ ಅಧಿಕಾರಿಗೊಂದಿಗೆ ಮತ್ತು ರಾಜಕಾರಣಿಗಳೊಂದಿಗೆ ನಡೆಸುವ ವ್ಯವಹಾರವಿದು. ಇದರಿಂದ ಇಬ್ಬರಿಗೂ ಪ್ರತ್ಯಕ್ಷ ಮತ್ತು ಪರೋಕ್ಷವಾದ ಕೆಲವೊಂದು ಲಾಭಗಳಿವೆ.

ಉದಾಹರಣೆಗೆ ಹೇಳುವುದಾದರೆ, ಅಲ್ಪಸಂಖ್ಯಾತರ ಮೆಟ್ರಿಕ್ ನಂತರದ ವಿದ್ಯಾರ್ಥಿನಿ ನಿಲಯ ಮತ್ತು ಹಿಂದುಳಿದ ವರ್ಗಗಳ ಮೆಟ್ರಿಕ್ ನಂತರದ ಮಹಿಳಾ ನರ್ಸಿಂಗ್ ವಿದ್ಯಾರ್ಥಿ ನಿಲಯಗಳಿರುವುದು ಉಡುಪಿ ನಗರದ ಬಲಾಯಿಪಾದೆಯಲ್ಲಿರುವ ಬಾಡಿಗೆ ಕಟ್ಟಡದಲ್ಲಿ. ಈ ಬಾಡಿಗೆ ಕಟ್ಟಡ ಸರಕಾರಿ ಅಧಿಕಾರಿಯೊಬ್ಬರಿಗೆ ಸೇರಿದ್ದು.

ಇತ್ತೀಚೆಗಿನವರೆಗೂ ಹಿಂದುಳಿದ ವರ್ಗಗಳ ಮೆಟ್ರಿಕ್ ನಂತರದ ವಿದ್ಯಾರ್ಥಿನಿ ನಿಲಯ ಇದ್ದುದು ಉಡುಪಿ ವಿದಾನಸಭಾ ಕ್ಷೇತ್ರ ವ್ಯಾಪ್ತಿಯ ತೊಟ್ಟಂ ಎಂಬಲ್ಲಿನ ಬಾಡಿಗೆ ಕಟ್ಟಡದಲ್ಲಿ. ಈ ಬಾಡಿಗೆ ಕಟ್ಟಡವನ್ನು ಉದ್ಘಾಟಿಸಿದವರು ಉಡುಪಿ ವಿಧಾನಸಭಾ ಕ್ಷೇತ್ರದ ಶಾಸಕರಾದ ಪ್ರಮೋದ್ ಮಧ್ವರಾಜ್ ಅವರು. ಅಂದರೆ ಈ ಕಟ್ಟಡದ ಮಾಲೀಕರು ಪ್ರಮೋದ್ ಮಧ್ವರಾಜ್ ಅವರಿಗೆ ಬೇಕಾದವರು.

ಬಾಡಿಗೆ ಕಟ್ಟದ ಮಾಲೀಕರಿಗೂ, ರಾಜಕಾರಣಿಗಳಿಗೂ, ಸರಕಾರಿ ಅಧಿಕಾರಿಗಳಿಗೂ ನಡುವೆ ಕೊಡು ಕೊಳ್ಳುವಿಕೆ ಇರುವುದರ ಪರಿಣಾಮವೇ, ಯಾವುದೇ ಮೂಲಭೂತ ಸೌಲಭ್ಯಗಳಿಲ್ಲದಿದ್ದರೂ ಹಾಸ್ಟೆಲ್ಗಳನ್ನು ಇಂಥ ನಿರ್ಧಿಷ್ಟ ಕಟ್ಟಡಗಳಲ್ಲಿ ಕಾರ್ಯನಿರ್ವಹಿಸುವಂತೆ ಮಾಡಲಾಗಿರುತ್ತದೆ. ಈ ಒಳ ಒಪ್ಪಂದದಿಂದಾಗಿ ಇವುಗಳ ಫಲಾನುಭವಿಗಳಿಗೆ ಪರಸ್ಪರ ಲಾಭ ಮಾಡಿಕೊಳ್ಳುತ್ತಾರೆ.

3 ವರ್ಷದಿಂದ ಶೇಷಪ್ಪರೇ ಪ್ರಭಾರ..!

ಜಿಲ್ಲಾ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿಯಾದ ಶೇಷಪ್ಪನವರೇ, ಕಳೆದ ಮೂರು ವರ್ಷಗಳಿಂದ ಜಿಲ್ಲಾ ಅಲ್ಪಸಂಖ್ಯಾತ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಪ್ರಭಾರ ಅಧಿಕಾರಿಯಾಗಿದ್ದಾರೆ. ಶೇಷಪ್ಪನವರು, ಉಡುಪಿ ಜಿಲ್ಲಾ ಉಸ್ತುವಾರಿ ಸಚಿವರಾದ ವಿನಯ ಕುಮಾರ್ ಸೊರಕೆಯವರ ಜಾತಿಗೆ ಸೇರಿದವರಾದ ಕಾರಣ ಹಾಗೂ ಸೊರಕೆಯವರ ಖಾಸಗಿ ಆಪ್ತ ಸಹಾಯಕನಂತೆ ನಡೆದುಕೊಳ್ಳುತ್ತಿರುವುದರಿಂದಲೇ ಶೇಷಪ್ಪ ಅವರು ಎರಡೂ ಇಲಾಖೆಗಳ ಅಧಿಕಾರಿಯಾಗು ಮುಮದುವರಿಯಲು ಕಾರಣವೆನ್ನಲಾಗಿದೆ.

ಎರಡು ಇಲಾಖೆಗಳೂ ಸಾಮಾನ್ಯ ಇಲಾಖೆಗಳೇನೂ ಅಲ್ಲ. ಅನೇಕ ಬಹುದೊಡ್ಡ ಜವಾಬ್ದಾರಿಗಳಿರುವ ಎರಡೂ ಇಲಾಖೆಗಳನ್ನು ಒಬ್ಬರೇ ವ್ಯಕ್ತಿ ನಿರ್ವಹಿಸುವುದು ಕಷ್ಟಸಾಧ್ಯವಾಗಿದೆಯಾದರೂ, ಕಳೆದ ಮೂರು ವರ್ಷಗಳಿಂದಲೂ ಒಬ್ಬರೇ ವ್ಯಕ್ತಿಯನ್ನು ಎರಡೂ ಇಲಾಖೆಗಳ ಅಧಿಕಾರಿಯನ್ನಾಗಿ ಮುಂದುವರಿಸಿರುವುದು ಜಾತಿ, ಹಣ ಮತ್ತು ರಾಜಕೀಯ ಲಾಬಿಯಲ್ಲದೇ ಬೇರೇನೂ ಅಲ್ಲ.

ಇವರೆಲ್ಲ ಏನೂ ಬೇಕಾದರೂ ಮಾಡಿಕೊಳ್ಳಲಿ, ಆದರೆ ಇವರ ಸ್ವಹಿತಾಸಕ್ತಿಯ ಕಾರ್ಯಕ್ಕಾಗಿ ವಿದ್ಯಾರ್ಥಿ – ವಿದ್ಯಾರ್ಥಿನಿಯರ ದಿನಚರಿಯನ್ನು ಯಾಕಾಗಿ ಇವರು ನರಕವನ್ನಾಗಿ ಮಾಡಬೇಕು ?

ಉಡುಪಿ: ರಾಜ್ಯದ 19 ಜಿಲ್ಲೆಗಳಲ್ಲಿ ನಡೆದ ಬಹುಕೋಟಿ ರಾಸಾಯನಿಕ ಹಗರಣವನ್ನು ಸಿಬಿಐ ತನಿಖೆಗೆ ಒಪ್ಪಿಸಬೇಕು ಮತ್ತು ಇತರ ಕೆಲವು ಪ್ರಮುಖ ಬೇಡಿಕೆಗಳನ್ನು ಮುಂದಿಟ್ಟುಕೊಂಡು 06.09.2014 ಶನಿವಾರದಂದು ಬೆಳಗ್ಗೆ ಗಂಟೆ 10ರಿಂದ ಸಂಜೆ 5 ಗಂಟೆ ವರೆಗೆ ಮಣಿಪಾಲ ಎಂಡ್ ಪಾಯಿಂಟ್ ರಸ್ತೆಯಲ್ಲಿರುವ ಉಡುಪಿ ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಒಂದು ದಿನದ ಸತ್ಯಾಗ್ರಹವನ್ನು ನಡೆಸಲಿರುವುದಾಗಿ ಕರ್ನಾಟಕ ಜನಪರ ವೇದಿಕೆ ಅಧ್ಯಕ್ಷ ಶ್ರೀರಾಮ ದಿವಾಣ ತಿಳಿಸಿದ್ದಾರೆ.

ಹಾಲಿ ಕಾಂಗ್ರೆಸ್ ಸರಕಾರದಲ್ಲಿ ಆರೋಗ್ಯ ಸಚಿವರಾಗಿರುವ ಯು.ಟಿ.ಖಾದರ್, ಕಳೆದ ಬಿಜೆಪಿ ಸರಕಾರದ ಅವಧಿಯಲ್ಲಿ ಆರೋಗ್ಯ ಸಚಿವರಾಗಿದ್ದ ಅರವಿಂದ ಲಿಂಬಾವಳಿ, ಉಡುಪಿ ವಿಧಾನಸಭಾ ಕ್ಷೇತ್ರದ ಶಾಸಕರಾದ ಪ್ರಮೋದ್ ಮಧ್ವರಾಜ್, ಕರ್ನಾಟಕ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಪ್ರಧಾನ ಕಾರ್ಯದರ್ಶಿಯಾಗಿದ್ದ ಮದನ್ ಗೋಪಾಲ್, ಆಯುಕ್ತರಾಗಿದ್ದ ವಿ.ಬಿ.ಪಾಟೀಲ್, ನಿರ್ದೇಶಕರಾದ ಡಾ.ಧನ್ಯ ಕುಮಾರ್, ವೈದ್ಯಕೀಯ ಸಹ ನಿರ್ದೇಶಕರಾದ ಡಾ.ಕೆ.ಬಿ.ಈಶ್ವರಪ್ಪ ಸಹಿತ ರಾಜ್ಯ ಮಟ್ಟದ ಇತರ ಉನ್ನತ ಅಧಿಕಾರಿಗಳು, 19 ಜಿಲ್ಲೆಗಳ ಜಿಲ್ಲಾಧಿಕಾರಿಗಳು, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖಾಧಿಕಾರಿಗಳು, ಜಿಲ್ಲಾ ಸರ್ಜನ್ ಗಳ ಸಹಿತ ಅನೇಕ ಮಂದಿ ಅಧಿಕಾರಿಗಳ ಪಾತ್ರವನ್ನು ಈ ಬಹುಕೋಟಿ ಹಗರಣದಲ್ಲಿ ತನಿಖೆಗೆ ಒಳಪಡಿಸುವ ಅಗತ್ಯ ಇರುವುದರಿಂದ ಸಿಬಿಐ ತನಿಖೆ ಅನಿವಾರ್ಯವಾಗಿದೆ ಎಂದು ಮಾಹಿತಿ ಹಕ್ಕು ಕಾರ್ಯಕರ್ತರೂ ಆದ ಶ್ರೀರಾಮ ದಿವಾಣ ತಿಳಿಸಿದ್ದಾರೆ.

ರಾಜ್ಯ ಮಟ್ಟದ ಬಹುಕೋಟಿ ಹಗರಣದ ಬಗ್ಗೆ ಮೊತ್ತ ಮೊದಲು ಅಧಿಕಾರಿಗಳ (ಸರಕಾರದ) ಗಮನಕ್ಕೆ ತಂದ ಉಡುಪಿ ಜಿಲ್ಲಾ ಸರಕಾರಿ ಅಸ್ಪತ್ರೆಯ ರಕ್ತನಿಧಿ ವಿಭಾಗದ ವೈದ್ಯಾಧಿಕಾರಿಯಾದ ಡಾ.ಶರತ್ ಕುಮಾರ್ ರಾವ್ ಅವರನ್ನು ಸುಳ್ಳು ದೂರಿನ ಆಧಾರದಲ್ಲಿ ಸರಿಯಾಗಿ ತನಿಖೆ ನಡೆಸದೆಯೇ ಅಮಾನತು ಮಾಡಿದ್ದು, ಅಮಾನತುಗೊಳಿಸಿ ವರ್ಷವಾಗುತ್ತಾ ಬಂದರೂ ಮತ್ತೆ ನೇಮಕ ಮಾಡದಿರುವುದು, ಕೆಲವೊಂದು ನಿರ್ಧಿಷ್ಟ ಸರಕಾರಿ ಅಧಿಕಾರಿಗಳು ಹಾಗೂ ನಿರ್ಧಿಷ್ಟ ಖಾಸಗಿ ವ್ಯಕ್ತಿಗಳು ನಿರಂತರವಾಗಿ ಅವರಿಗೆ ಮತ್ತು ಬಹುಕೋಟಿ ಹಗರಣದ ಬಗ್ಗೆ ಸಾಕ್ಷ್ಯ ನುಡಿದವರಿಗೆ ಕಿರುಕುಳ ನೀಡುತ್ತಿರುವುದು ಇತ್ಯಾದಿ ನಡೆಯುತ್ತಿದೆ ಎಂದು ಮಾನ ವಹಕ್ಕು ಕಾರ್ಯಕರ್ತರೂ ಆಗಿರುವ ಶ್ರೀರಾಮ ದಿವಾಣ ಆರೋಪಿಸಿದ್ದಾರೆ.

ಈ ಎಲ್ಲಾ ವಿಷಯಗಳಲ್ಲಿ ನೊಂದವರಿಗೆ ಸಲ್ಲಬೇಕಾದ ಸಹಜ ನ್ಯಾಯವನ್ನು ಅತ್ಯಂತ ವ್ಯವಸ್ಥಿತವಾಗಿ ನಿರಾಕರಿಸಲಾಗುತ್ತಿದೆ. ತಪ್ಪೆಸಗಿದವರಿಗೆ ಶಿಕ್ಷೆ ನೀಡುವುದು ಬಿಟ್ಟು ರಕ್ಷಣೆ ನೀಡಲಾಗುತ್ತಿದೆ. ಈ ನಿಟ್ಟಿನಲ್ಲಿ ಮೊದಲ ಹಂತವಾಗಿ ಸೆ.6ರಂದು ಸತ್ಯಾಗ್ರಹ ನಡೆಸುತ್ತಿದ್ದು, ನ್ಯಾಯ ಲಭಿಸದಿದ್ದಲ್ಲಿ ಹೋರಾಟವನ್ನು ಹಂತ ಹಂತವಾಗಿ ರಾಜ್ಯ ಮಟ್ಟಕ್ಕೆ ವಿಸ್ತರಿಸಲಾಗುವುದು. ನ್ಯಾಯಪರರು, ಭ್ರಷ್ಟಚಾರ ವಿರೋಧಿಗಳು ಸತ್ಯಾಗ್ರಹದಲ್ಲಿ ಭಾಗಿಯಾಗುವ ಮೂಲಕ ಸಹಕರಿಸಬೇಕು ಎಂದು ಶ್ರೀರಾಮ ದಿವಾಣ
ವಿನಂತಿಸಿಕೊಂಡಿದ್ದಾರೆ.